ಫೆ.9: ಮಂಗಳೂರು ತಾಲೂಕು ಕಸಾಪ ಸಮ್ಮೇಳನ

Update: 2021-01-28 15:50 GMT

ಮಂಗಳೂರು, ಜ. 28: ಪಣಂಬೂರು ನಂದನೇಶ್ವರ ದೇವಸ್ಥಾನದ ನಟರಾಜ ರಂಗಸಂಗಮ ವೇದಿಕೆಯಲ್ಲಿ ಫೆ.9ರಂದು ಮಂಗಳೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಸಮ್ಮೇಳನದ ಅಧ್ಯಕ್ಷರನ್ನಾಗಿ ಹಿರಿಯ ವಿದ್ವಾಂಸ ಪೊಳಲಿ ನಿತ್ಯಾನಂದ ಕಾರಂತ ಅವರನ್ನು ಆಯ್ಕೆ ಮಾಡಲಾಯಿತು.

ತಾಲೂಕು ಘಟಕಾಧ್ಯಕ್ಷೆ ವಿಜಯಲಕ್ಷ್ಮಿ ಬಿ.ಶೆಟ್ಟಿ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಜರುಗಿದ ಪೂರ್ವಭಾವಿ ಸಭೆಯಲ್ಲಿ ಈ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು. ಸಮ್ಮೇಳನದಲ್ಲಿ ವಿವಿಧ ಗೊಷ್ಠಿಗಳು, ಯುವ ಕವಿಗೊಷ್ಠಿ, ಸಾಧಕರಿಗೆ ಸನ್ಮಾನ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

ಸಭೆಯಲ್ಲಿ ಕೊಶಾಧಿಕಾರಿ ಪಿ.ಕೃಷ್ಣ ಮೂರ್ತಿ, ಹೊಬಳಿ ಸಂಚಾಲಕ ವಿನಯ ಆಚಾರ್ಯ, ಸದಸ್ಯರಾದ ವಿಜಯಲಕ್ಷ್ಮಿ ಭಟ್, ಅರುಣಾ ನಾಗರಾಜ್, ರಘು ಇಡ್ಕಿದು, ಚೇತನ್ ಕದ್ರಿ, ಮೋಲಿ ಮಿರಾಂದ, ಜಯಲಕ್ಷ್ಮಿ ಬಿ.ಆರ್. ಉಪಸ್ಥಿತರಿದ್ದರು. ಕಾರ್ಯದರ್ಶಿ ಡಾ.ಎಕ್ಕಾರು ಪದ್ಮನಾಭ ಭಟ್ ಸ್ವಾಗತಿಸಿದರು. ದೇವಕಿ ಅಚ್ಚುತ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News