×
Ad

ಬೆಂಗಳೂರು ಕಸಾಪ ನೀಡುವ ‘ಕನ್ನಡ ಸೇವಾರತ್ನ ಪ್ರಶಸ್ತಿ’ಗೆ ಪ್ರಮೋದ್ ಸಪ್ರೆ ಆಯ್ಕೆ

Update: 2021-01-31 11:08 IST

ಮಂಗಳೂರು, ಜ.31: ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು ಇವರು ನೀಡುವ ‘ಕನ್ನಡ ಸೇವಾ ರತ್ನ  ಪ್ರಶಸ್ತಿ’ಗೆ ಮೂಡುಬಿದಿರೆ ಕಾಂತಾವರದ ಸಂಗೀತ ನಿರ್ದೇಶಕ ಪ್ರಮೋದ್ ಸಪ್ರೆ ಆಯ್ಕೆಯಾಗಿದ್ದಾರೆ

ಜ.31ರಂದು ಬೆಂಗಳೂರಿನ ಮಲ್ಲೇಶ್ವರಂನ ಚೌಡಯ್ಯ ಮೆಮೋರಿಯಲ್ ಹಾಲ್ ನಲ್ಲಿ ಜರುಗುವ ಕಾರ್ಯಕ್ರಮದಲ್ಲಿ ಸಪ್ರೆ ಯವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಬೆಂಗಳೂರು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ಮಾಯಣ್ಣ ತಿಳಿಸಿದ್ದಾರೆ

ಮೂಲತಃ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆಯ ಕಾಂತಾವರದ ಸಮೀಪದವರಾದ ಪ್ರಮೋದ್ ಸಪ್ರೆ ಹಿಂದೂಸ್ತಾನಿ, ಕರ್ನಾಟಿಕ್, ಸುಗಮ ಸಂಗೀತ ಸೇರಿದಂತೆ ಸಂಗೀತ ಕ್ಷೇತ್ರದಲ್ಲಿ ಗುರುತಿಸಿಕೊಂಡವರಾಗಿದ್ದು ಹಾಡುಗಳಿಗೆ ರಾಗ ಸಂಯೋಜನೆ ಹಾಗೂ ಸಂಗೀತ ನಿರ್ದೇಶನ ನೀಡುವ ಮೂಲಕ ಸಂಗೀತ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದಾರೆ. ಕನ್ನಡದ ಹಲವಾರು ಧ್ವನಿ ಸುರುಳಿಗಳಿಗೆ, ಚಲನಚಿತ್ರಗಳಿಗೆ,  ಗೀತಗಾಯನ ,ನಾಟಕಗಳಿಗೆ  ಸಂಗೀತ ನಿರ್ದೇಶನ ನೀಡಿದ ಅನುಭವಿ ಸಂಗೀತ ನಿರ್ದೇಶಕರಾಗಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News