×
Ad

ಉಡುಪಿ ಮದನೀಸ್ ನೂತನ ಪದಾಧಿಕಾರಿಗಳ ಆಯ್ಕೆ

Update: 2021-02-03 20:39 IST

ಉಡುಪಿ, ಫೆ.3: ಉಳ್ಳಾಲದ ಸಯ್ಯದ್ ಮದನಿ ಅರಬಿಕ್ ಕಾಲೇಜು ಪದವಿ ಧಾರಿಗಳ ಸಂಘಟನೆ ಮದನೀಸ್ ಅಸೋಸಿಯೇಶನ್ ಇದರ ಉಡುಪಿ ಜಿಲ್ಲಾ ಸಮಿತಿಯ ವಾರ್ಷಿಕ ಮಹಾಸಭೆ ಇತ್ತೀಚೆಗೆ ಉಡುಪಿ ಅಜ್ಜರಕಾಡಿನಲ್ಲಿರುವ ಎಸ್‌ವೈಎಸ್ ಕಚೇರಿಯಲ್ಲಿ ನಡೆಯಿತು.

ಜಿಲ್ಲಾಧ್ಯಕ್ಷ ಅಸ್ಸಯ್ಯಿದ್ ಅಲವಿ ತಂಙಳ್ ಅಲ್ ಮದನಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯನ್ನು ಬಿ.ಎ.ಇಸ್ಮಾಯಿಲ್ ಮದನಿ ಮಾವಿನಕಟ್ಟೆ ಉದ್ಘಾಟಿ ಸಿದರು. ಪ್ರಧಾನ ಕಾರ್ಯದರ್ಶಿ ಎನ್.ಎ.ನೌಫಲ್ ಮದನಿ ನೇಜಾರ್ ವಾರ್ಷಿಕ ವರದಿ ವಾಚಿಸಿದರು. ಸಭೆಯ ವೀಕ್ಷಕರಾಗಿ ಆಗಮಿಸಿದ್ದ ಬುಖಾರಿ ಮದನಿ ಮತ್ತು ಮುಹಮ್ಮದ್ ಮದನಿ ಕಟ್ಪತ್ತಿಲ ಪ್ರಾಸ್ತಾವಿಕ ಭಾಷಣ ಮಾಡಿದರು.

ಇದೇ ಸಂದರ್ಭದಲ್ಲಿ 20021-24 ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಅಸ್ಸಯ್ಯಿದ್ ಅಲವಿ ತಂಙಳ್ ಅಲ್ ಮದನಿ ಕರ್ಕಿ, ಪ್ರಧಾನ ಕಾರ್ಯದರ್ಶಿಯಾಗಿ ಎನ್.ಎ.ನೌಫಲ್ ಮದನಿ ನೇಜಾರ್, ಕೋಶಾಧಿಕಾರಿಯಾಗಿ ಬಿ.ಎ.ಇಸ್ಮಾಯಿಲ್ ಮದನಿ ಮಾವಿನಕಟ್ಟೆ, ಉಪಾಧ್ಯಕ್ಷರುಗಳಾಗಿ ಬಷೀರ್ ಮದನಿ ಕಣ್ಣಂಗಾರ್, ಇಬ್ರಾಹಿಂ ಮದನಿ ಮೂಳೂರು, ಅಬ್ದುಲ್ ಹಮೀದ್ ಮದನಿ ರಂಗನಕೆರೆ, ಕಾರ್ಯದರ್ಶಿಗಳಾಗಿ ಹಾಫಿಲ್ ಹಾರಿಸ್ ಮದನಿ ಕಣ್ಣಾಂಗಾರ್, ಅಬ್ದುರಝಾಕ್ ಮದನಿ ನಿಟ್ಟೆ, ಶರೀಫ್ ಮದನಿ ಹೊಸ್ಮಾರ್, ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಅಬ್ದುಲ್ ಹಮೀದ್ ಮದನಿ ನಾವುಂದ, ಅಬ್ದುಲ್ ಖಾದರ್ ಮದನಿ ಹೊನ್ನಾವರ, ಅಬ್ದುಲ್ ಸಮದ್ ಮದನಿ ಸಾಸ್ತಾನ, ಅಬ್ದುಲ್ ಮುತ್ತಲಿಬ್ ಮದನಿ, ಶರಫುದ್ದೀನ್ ಮದನಿ ಅಂಬಾಗಿಲು, ಮಶ್ಹೂದ್ ಮದನಿ ನಾವುಂದ, ಬದ್ರುದ್ದೀನ್ ಮದನಿ ರಂಗನಕೆರೆ ಆಯ್ಕೆಯಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News