×
Ad

ಉತ್ತರಾಖಂಡ್ ಹಿಮಪಾತ : ಪೇಜಾವರ ಶ್ರೀ ಕಳವಳ

Update: 2021-02-07 17:37 IST

ಉಡುಪಿ : ಉತ್ತರಾಖಂಡ್ ನಲ್ಲಿ ರವಿವಾರ ಭೀಕರ ಹಿಮಪಾತ ಸಂಭವಿಸಿ, ಕೆಲವರು ಮೃತಪಟ್ಟು ಹಲವಾರು ಮಂದಿ ಕೊಚ್ಚಿ ಹೋಗಿ ಕಣ್ಮರೆಯಾಗಿರುವ ಬಗ್ಗೆ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

ಈ  ಪ್ರಾಕೃತಿಕ ದುರ್ಘಟನೆಯಿಂದ ತೀವ್ರ ಬೇಸರವಾಗಿದೆ . ಇದರಿಂದ ಸಂತ್ರಸ್ತರಾಗಿರುವವರ ನೋವಿಗೆ ನಮ್ಮ ಸಹಾನುಭೂತಿ ಇದೆ . ಉತ್ತರಾಖಂಡ್ ರಾಜ್ಯದ ಸಮಸ್ತ ಜನತೆಯ ಶ್ರೇಯಸ್ಸಿಗಾಗಿ ಭಗವಂತನಲ್ಲಿ ಪ್ರಾರ್ಥಿಸುತ್ತೇವೆ . ಘಟನೆಯಿಂದ ಮೃತರಾಗಿರುವವರಿಗೆ ದೇವರು ಸದ್ಗತಿಯನ್ನು ಕರುಣಿಸಲಿ . ನಾಪತ್ತೆಯಾಗಿರುವವರು ಯಾವುದೇ ಅಪಾಯವಿಲ್ಲದೆ ಶೀಘ್ರವಾಗಿ ಪತ್ತೆಯಾಗಲೆಂದು ಆಶಿಸುತ್ತೇವೆ ಎಂದು ಶ್ರೀಗಳು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News