×
Ad

ದೇಶದಲ್ಲಿ ಇಂದಿಗೂ ಸೋಲುವ, ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ರೈತರ ಸಂಖ್ಯೆ ಹೆಚ್ಚಳ : ಚಿಂತಕ ಶ್ರೀಧರಮೂರ್ತಿ

Update: 2021-02-07 20:01 IST

ಉಡುಪಿ, ಫೆ.7: ಕೃಷಿ ಪ್ರಗತಿ ಬೇಕಾದಷ್ಟು ಅನೇಕ ಯೋಜನೆಗಳು, ಹಣ ಕಾಸಿನ ಬೆಂಬಲ, ಬೆಂಬಲ ಬೆಲೆ, ಸಬ್ಸಿಡಿಗಳಿದ್ದರೂ ಇವುಗಳನ್ನು ಬಳಸಿಕೊಂಡು ಸಾಧಕ ರೈತರೆಂದು ಅನಿಸಿಕೊಂಡವರ ಸಂಖ್ಯೆ ಬಹಳ ಕಡಿಮೆ. ಇಷ್ಟೆಲ್ಲ ಇದ್ದರೂ ನಮ್ಮ ದೇಶದಲ್ಲಿ ಸೋಲುತ್ತಿರುವ ಹಾಗೂ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ರೈತರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ತೀರ್ಥಹಳ್ಳಿಯ ನಿವೃತ್ತ ಉಪನ್ಯಾಸ ಹಾಗೂ ಚಿಂತಕ ಶ್ರೀಧರಮೂರ್ತಿ ಕೆ.ಎಸ್. ಕಳವಳ ವ್ಯಕ್ತಪಡಿಸಿದ್ದಾರೆ.

ಉಡುಪಿ ಜಿಲ್ಲಾ ಕೃಷಿಕ ಸಂಘದ ವತಿಯಿಂದ ರವಿವಾರ ಕುಂಜಿಬೆಟ್ಟು ಶಾರದಾ ಮಂಟಪದಲ್ಲಿ ಆಯೋಜಿಸಲಾದ ರೈತ ಸಮಾವೇಶದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು.

ಸ್ವಾತಂತ್ರ ಬಂದ ಬಳಿಕ ದೇಶದಲ್ಲಿ ಗಟ್ಟಿ, ಸಿದ್ಧ ಮಾದರಿ ಮತ್ತು ನಿರಂತರ ವಾದ ರೂಪುರೇಷೆಯು ಶಿಕ್ಷಣ ಹಾಗೂ ಕೃಷಿಗೆ ಬಂದಿಲ್ಲ. ರೈತರ ಮಧ್ಯೆಯೇ ಅಜಗಜಾಂತರ ಇರುವುದರಿಂದ ಕೃಷಿ ಸಮಸ್ಯೆ ಪರಿಹಾರ ಎಂಬುದು ಏಕರೂಪ ವಾಗಿರಲು ಸಾಧ್ಯವೇ ಇಲ್ಲ ಎಂದು ಅವರು ತಿಳಿಸಿದರು.

ಕೃಷಿ ಕ್ಷೇತ್ರದಲ್ಲಿ ಅತ್ಯಂತ ಸಂಕೀರ್ಣ ಹಾಗೂ ಜಟಿಲವಾದ ಜಾಲ ಇದೆ. ಇದರಲ್ಲಿ ತೊಡಗಿಸಿಕೊಂಡವರಿಗೆ ಅನೇಕ ಸಸ್ಯ, ವೈವಿಧಯ ಮಣ್ಣು, ಕ್ರಿಮಿ ಕೀಟಗಳ ಪರಿಚಯ ಆಗುತ್ತದೆ. ಹೀಗೆ ಪ್ರಕೃತಿಯಲ್ಲಿರುವ ನಿಗೂಢವನ್ನು ಕೃಷಿಕ ಅರಿತುಕೊಳ್ಳುತ್ತ ಹೋಗಲು ಸಾಧ್ಯವಾಗುತ್ತದೆ. ಹೀಗೆ ಇಡೀ ಕೃಷಿ ಕ್ಷೇತ್ರದ ಜಾಲವು ಒಂದು ಸೂತ್ರಕ್ಕೆ ಒಗ್ಗದ ಬಗ್ಗದ ಅರ್ಥ ಮಾಡಿಕೊಳ್ಳದ ಜಟಿಲತೆ ಹೊಂದಿರುವುದರಿಂದ ಇಂದಿಗೂ ಅದು ಅನಾಕರ್ಷಕವಾಗಿದೆ ಎಂದರು.

ಸಮಾವೇಶವನ್ನು ಉದ್ಘಾಟಿಸಿದ ಉಡುಪಿ ಜಿಪಂ ಮುಖ್ಯ ಕಾರ್ಯನಿರ್ವ ಹಣಾಧಿಕಾರಿ ಡಾ.ನವೀನ್ ಭಟ್ ಮಾತನಾಡಿ, ವೈಜ್ಞಾನಿಕ ಪ್ರಾಯೋಗಿಕ ಕೃಷಿ ನಮ್ಮಲ್ಲಿ ಇನ್ನು ಹೆಚ್ಚು ಮೂಡಿಬರಬೇಕು. ಶಿಕ್ಷಣ, ಆರೋಗ್ಯದಂತೆ ಕೃಷಿ ಯಲ್ಲೂ ಉಡುಪಿ ಮಾದರಿ ಜಿಲ್ಲೆಯಾಗಬೇಕು. ಈ ಮೂಲಕ ದೇಶ ವಿದೇಶ ದಿಂದ ನಮ್ಮ ಮಾದರಿ ರೈತರ ಬಗ್ಗೆ ಅಧ್ಯಯನ ಮಾಡಲು ಜನ ಬರುವಂತೆ ಮಾಡಬೇಕು. ಇದು ರೈತರು ಜಿಲ್ಲೆಗೆ ನೀಡುವ ಬಹಳ ದೊಡ್ಡ ಕೊುಗೆ ಆಗುತ್ತದೆ ಎಂದು ಹೇಳಿದರು.

ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಬಂಟಕಲ್ಲು ವಹಿಸಿದ್ದರು. ಈ ಸಂದರ್ಭದಲ್ಲಿ ಕೃಷಿ ಸಾಧಕರುಗಳಾದ ಉದಯ ಕುಮಾರ್ ಆಚಾರ್ಯ ಹಿರಿಯಡ್ಕ, ರಘುನಾಥ ಪುನಾರ್ ಬೆಳ್ಮಣ್, ಸುಜಾತ ಶೆಟ್ಟಿ ಮಂದರ್ತಿ, ಜೋನ್ ಅಮ್ಮಣ್ಣ ಮುದರಂಗಡಿ, ವಿಶ್ವನಾಥ ಅಮೀನ್ ಕಳತ್ತೂರು ಅವರನ್ನು ಸನ್ಮಾನಿಸಲಾಯಿತು.

ಕರ್ಣಾಟಕ ಬ್ಯಾಂಕ್ ಉಡುಪಿ ಪ್ರಾದೇಶಿಕ ಕಚೇರಿಯ ಎಜಿಎಂ ಬಿ. ಗೋಪಾಲಕೃಷ್ಣ ಸಾಮಗ, ರೋಟರಿ ಮಾಜಿ ಸಹಾಯಕ ಗವರ್ನರ್ ಮಂಜು ನಾಥ್ ಉಪಾಧ್ಯ, ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕ ಡಾ.ಕೆಂಪೇಗೌಡ, ಉಪನಿರ್ದೇಶಕ ಚಂದ್ರಶೇಖರ್ ನಾಯಕ್ ಮುಖ್ಯ ಅತಿಥಿ ಗಳಾಗಿದ್ದರು. ಸಂಘದ ಉಪಾಧ್ಯಕ್ಷ ದಿನಕರ ಶೆಟ್ಟಿ ಹೆರ್ಗ ಉಪಸ್ಥಿತರಿದ್ದರು.

ಪ್ರಧಾನ ಕಾರ್ಯದರ್ಶಿ ಕುದಿ ಶ್ರೀನಿವಾಸ ಭಟ್ ವರದಿ ಮಂಡಿಸಿದರು. ಉಪಾಧ್ಯಕ್ಷ ಶ್ರೀನಿವಾಸ ಬಲ್ಲಾಳ್ ಮಲ್ಲಂಪಳ್ಳಿ ಸ್ವಾಗತಿಸಿದರು. ಕಾರ್ಯ ದರ್ಶಿ ರವೀಂದ್ರ ಗುಜ್ಜರಬೆಟ್ಟು ಪ್ರಸ್ತಾವಿಕವಾಗಿ ಮಾತನಾಡಿದರು. ಶೀಂಬ್ರ ರವೀಂದ್ರ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.

1500 ಹೆಕ್ಟೇರ್ ಪಾಳುಬಿದ್ದ ಭೂಮಿಯಲ್ಲಿ ಕೃಷಿ

ಕಳೆದ ವರ್ಷ ಕೃಷಿ ಇಲಾಖೆಯ ಜಿಲ್ಲೆ 1500 ಹೆಕ್ಟೇರ್ ಪಾಳು ಬಿದ್ದ ಕೃಷಿ ಭೂಮಿಯನ್ನು ಗುತ್ತಿಗೆ ಪಡೆದುಕೊಂಡು ಭತ್ತದ ಕೃಷಿ ಮಾಡಿದೆ. ಅದೇ ರೀತಿ ಜಿಲ್ಲಾಡಳಿತ, ಜಿಪಂ, ಕೃಷಿ ಇಲಾಖೆಯು ಮತ್ತೆ 1500 ಹೆಕ್ಟೇರ್ ಪಾಳು ಬಿದ್ದ ಜಮೀನನ್ನು ಪಡೆದು ಕೃಷಿಗೆ ಪರಿವರ್ತನೆ ಮಾಡಿ ಕೊಳ್ಳಬೇಕು. ಸರಕಾರ ಹೀಗೆ ಹೆಚ್ಚು ಹೆಚ್ಚು ಭೂಮಿಯನ್ನು ಕೃಷಿಗೆ ಪರಿವರ್ತನೆ ಮಾಡಿಕೊಂಡರೆ ಕೃಷಿಯಲ್ಲಿ ಜಿಲ್ಲೆ ಪ್ರಗತಿ ಸಾಧಿಸಲು ಸಾಧ್ಯವಾಗುತ್ತದೆ ಎಂದು ಜಿಂ ಸಿಇಓ ಡಾ.ನವೀನ್ ಭಟ್ ತಿಳಿಸಿದರು.

ನಮ್ಮಲ್ಲಿ ಬೆಳೆಯುವ ಮಲ್ಲಿಗೆಯನ್ನು ಎಣ್ಣೆಗೆ ಮಾತ್ರವಲ್ಲದೆ ಇತರ ಮಾರುಕಟ್ಟೆ ಕಲ್ಪಿಸುವ ನಿಟ್ಟಿನಲ್ಲಿ ತೋಟಗಾರಿಕೆ ಇಲಾಖೆ ಸಂಶೋಧನೆ ಮಾಡಬೇಕಾಗಿದೆ. ರೇಷ್ಮೆ, ಅಣಬೆ ಕೃಷಿ ಬಗ್ಗೆಯೂ ಜಿಲ್ಲೆಯಲ್ಲಿ ಹೆಚ್ಚು ಆಸಕ್ತಿ ತೋರಬೇಕು. ದೊಡ್ಡ ರೈತರು ಇದನ್ನು ಪ್ರಾಯೋಗಿಕವಾಗಿ ಮಾಡುವುದರಿಂದ ಜಿಲ್ಲೆಯಲ್ಲಿ ಮಾದರಿ ಕೃಷಿಕರು ಹೆ್ಚಾಗಲು ಸಾಧ್ಯವಾಗುತ್ತದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News