ಫೆ.11 : ಉಡುಪಿ ನಗರದಲ್ಲಿ ನೀರು ಸರಬರಾಜು ವ್ಯತ್ಯಯ
Update: 2021-02-10 22:11 IST
ಉಡುಪಿ, ಫೆ.10: ಉಡುಪಿ ನಗರಸಭಾ ವ್ಯಾಪ್ತಿಯ ಇಂದಿರಾನಗರ ನೀರಿನ ಟ್ಯಾಂಕ್ ಬಳಿ ಮುಖ್ಯ ಕೊಳವೆ ಮಾರ್ಗದಲ್ಲಿ ದುರಸ್ಥಿ ಕಾರ್ಯ ನಡೆಯಲಿರುವುದರಿಂದ ಫೆ.11ರ ಗುರುವಾರದಂದು ಕುಕ್ಕಿಕಟ್ಟೆ, ಇಂದಿರಾನಗರ, ಬೈಲೂರು ಹಾಗೂ ಚಿಟ್ಪಾಡಿ ವ್ಯಾಪ್ತಿಯಲ್ಲಿ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಸಾರ್ವಜನಿಕರು ನಗರಸಭೆಯೊಂದಿಗೆ ಸಹಕರಿಸುವಂತೆ ಉಡುಪಿ ನಗರಸಭಾ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.