ವಿಟ್ಲ ಪೊಲೀಸ್ ಠಾಣಾಧಿಕಾರಿಯನ್ನು ಅಭಿನಂದಿಸಿದ ವೆಲ್ಪೇರ್ ಪಾರ್ಟಿ ಆಫ್ ಇಂಡಿಯಾ

Update: 2021-02-10 17:16 GMT

ಮಂಗಳೂರು, ಫೆ. 10: ವಿಟ್ಲ ವಲಯದ ವೆಲ್ಪೇರ್ ಪಾರ್ಟಿ ಆಫ್ ಇಂಡಿಯಾ, ಇದರ ಕಾರ್ಯಕರ್ತರ ನಿಯೋಗವು ಇತ್ತೀಚೆಗೆ ವಿಟ್ಲ ಪೊಲೀಸ್ ಠಾಣೆಗೆ  ಭೇಟಿ ನೀಡಿ ಠಾಣಾಧಿಕಾರಿ ವಿನೋದ್ ಕುಮಾರ್ ರೆಡ್ಡಿಯವರನ್ನು ಅಭಿನಂದಿಸಿತು.

ವೆಲ್ಪೇರ್ ಪಾರ್ಟಿ ಆಫ್ ಇಂಡಿಯಾ, ಇದರ ವಿಟ್ಲ ವಲಯದ ಅಧ್ಯಕ್ಷ ಎಮ್. ಎ. ರಹಿಮಾನ್ ನೇತೃತ್ವದಲ್ಲಿ ತೆರಳಿದ ತಂಡವು ಇತ್ತೀಚಿನ ದಿನಗಳಲ್ಲಿ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದ ಕೆಲವು ಕಳ್ಳತನ ಪ್ರಕರಣಗಳ ನೈಜ ಅಪರಾಧಿಗಳನ್ನು ಕ್ಷಿಪ್ರವಾಗಿ ಬಂಧಿಸಿದ ಮತ್ತು ಕೇವಲ ಪ್ರೇಮ ಪ್ರಕರಣವನ್ನು ಮರೆ ಮಾಚಿಸುವ ತಂತ್ರಕ್ಕಾಗಿ, ಕಳ್ಳತನದ ಸುಳ್ಳು ಮೊಕದ್ದಮೆ ಹೂಡಿ ಸಾರ್ವಜನಿಕರಲ್ಲಿ ಭೀತಿ ಮೂಡಿಸಿದ ಪ್ರಹಸನಗಳ ಹಿನ್ನೆಲೆಯನ್ನೂ ಯಶಸ್ವಿಯಾಗಿ ಭೇದಿಸಿದ ಅವರ ಕಾರ್ಯವೈಖರಿಯನ್ನು ಮುಕ್ತ ಕಂಠದಿಂದ ಶ್ಲಾಘಿಸಿದ್ದಲ್ಲದೆ, ವಿನೋದ್ ಕುಮಾರ್ ರೆಡ್ಡಿಯವರ ಕರ್ತವ್ಯ ನಿಷ್ಠೆ ಹಾಗೂ ಯಾವುದೇ  ಪ್ರಕರಣಗಳನ್ನು ಬಾಹ್ಯ ಒತ್ತಡಕ್ಕೆ ಮಣಿಯದೆ ಪ್ರಾಮಾಣಿಕ ಪ್ರಯತ್ನವನ್ನು ಮುಂದುವರಿಸುವಲ್ಲಿ ವೆಲ್ಪೇರ್ ಪಾರ್ಟಿ ಆಫ್ ಇಂಡಿಯಾ ಇದರ  ಪೂರ್ಣ ಬೆಂಬಲವನ್ನು ನೀಡುವ  ಮತ್ತು ತಮ್ಮ ಎಲ್ಲಾ ಸಮಾಜಮುಖಿ ಕೆಲಸಗಳಲ್ಲಿ ಹೆಚ್ಚು ಹೆಚ್ಚು ಸಾರ್ವಜನಿಕ ಸಹಕಾರ ಒದಗಿಸುವಲ್ಲಿ ಪಕ್ಷದ ವತಿಯಿಂದಲೂ, ಕಾರ್ಯೋನ್ಮುಖರಾಗುವೆಂಬ ಭರವಸೆಯನ್ನು ನೀಡಿರುವುದಾಗಿ ವೆಲ್ಪೇರ್ ಪಾರ್ಟಿ ಆಫ್ ಇಂಡಿಯಾ ಇದರ ವಿಟ್ಲ ಕಚೇರಿಯ ಪ್ರಕಟಣೆಯಲ್ಲಿ ತಿಳಿಸಿರುವರು.

ಪ್ರಸ್ತುತ ನಿಯೋಗದಲ್ಲಿ ಪಕ್ಷದ ಬಂಟ್ವಾಳ ತಾಲೂಕು ಕಾರ್ಯದರ್ಶಿ ಇಸಾಕ್ ನೀರ್ಕಜೆ ಮತ್ತು ಇತರ ಕಾರ್ಯಕರ್ತರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News