ಕೋವಿಡ್‌ ಕಾರಣದಿಂದಾಗಿ ಸ್ವತಃ ಐಸೋಲೇಶನ್‌ಗೆ ಒಳಗಾದ ಶಶಿಕಲಾ

Update: 2021-02-11 08:41 GMT

 ಚೆನ್ನೈ: ಬೆಂಗಳೂರಿನಿಂದ ಚೆನ್ನೈಗೆ ಆಗಮಿಸಿದ ಬಳಿಕ ಅಭಿಮಾನಿಗಳಿಂದ ಭರ್ಜರಿ ಸ್ವಾಗತ ಪಡೆದಿದ್ದ ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಆಪ್ತೆ, ಎಐಎಡಿಎಂಕೆ ಉಚ್ಚಾಟಿತ ನಾಯಕಿ ಶಶಿಕಲಾ ಅವರು ಇತ್ತೀಚೆಗೆ ಕಾಣಿಸಿಕೊಂಡಿರುವ ಕೋವಿಡ್-19 ಸೋಂಕಿನಿಂದ ಚೇತರಿಸಿಕೊಳ್ಳುತ್ತಿದ್ದು, ಮುಂದಿನ ಒಂದು ವಾರ ಸ್ವತಃ ಐಸೋಲೇಶನ್ ನಲ್ಲಿ ಇರಲು ಬಯಸಿದ್ದಾರೆ.

ಅಕ್ರಮ ಆಸ್ತಿ ಗಳಿಕೆಯ ಪ್ರಕರಣದಲ್ಲಿ ತನ್ನೊಂದಿಗೆ ತಪ್ಪಿತಸ್ಥರಾಗಿರುವ ಸಂಬಂಧಿ ಇಳವರಸಿ ಕೂಡ ಚೆನ್ನೈನ ಟಿ.ನಗರದಲ್ಲಿರುವ ಮನೆಯಲ್ಲಿ ಶಶಿಕಲಾಗೆ ಸಾಥ್ ಕೊಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

  ಮಂಗಳವಾರ ನಗರಕ್ಕೆ ಆಗಮಿಸಿದ ಬಳಿಕ ಶಶಿಕಲಾ ಅವರ ಮನೆಯ ಮುಂದೆ ಅಭಿಮಾನಿಗಳು ಜಮಾಯಿಸುತ್ತಿದ್ದಾರೆೆ. ಕೆಲವು ಎಐಎಡಿಎಂಕೆ ಪದಾಧಿಕಾರಿಗಳು ಶಶಿಕಲಾರನ್ನು ಭೇಟಿಯಾಗಿದ್ದಾರೆ. ಭಾರೀ ಸ್ವಾಗತ ಕಾರ್ಯಕ್ರಮವನ್ನು ಆಯೋಜಿಸಿದ್ದ ದಿನಕರನ್ ಅವರು ಶಶಿಕಲಾ ಅವರ ಆಪ್ತರ ಬಳಗವನ್ನು ಪರಿಚಯಿಸಿದ್ದು, ಈ ವೇಳೆ ಶಶಿಕಲಾ ಅವರು ಎಐಎಡಿಎಂಕೆ ಕಾರ್ಯವೈಖರಿಯನ್ನು ಶ್ಲಾಘಿಸಿದರು.

ಆಡಳಿತಾರೂಢ ಎಐಎಡಿಎಂಕೆಯ ಮೇಲೆ ಹಿಡಿತ ಸಾಧಿಸಲು ಶಶಿಕಲಾ ನ್ಯಾಯಾಂಗ ಹೋರಾಟ ನಡೆಸಲಿದ್ದಾರೆ ಎಂದು ದಿನಕರನ್ ಮಾಹಿತಿ ನೀಡಿದ್ದಾರೆ.

ಎಐಎಡಿಎಂಕೆಗೆ ಸಂಬಂಧಿಸಿದ ವಿಚಾರಕ್ಕೆ ಸಂಬಂಧಿಸಿ ಮುಂದಿನ ಕ್ರಮ ಕೈಗೊಳ್ಳುವ ಕುರಿತಂತೆ ಚರ್ಚಿಸಲು ಶಶಿಕಲಾ ಬಯಸಿದ್ದು, ಕಾನೂನು ತಂಡವು ಅವರನ್ನು ಭೇಟಿಯಾಗಲು ಕಾತರದಿಂದಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News