ಅತೂರಿನಲ್ಲಿ ಎಸ್ಕೆಎಸ್ಸೆಸ್ಸೆಫ್ ಸ್ಥಾಪನಾ ದಿನಾಚರಣೆ

Update: 2021-02-19 09:50 GMT

ಪುತ್ತೂರು: ಎಸ್ಕೆಎಸ್ಸೆಸ್ಸೆಫ್ ಅತೂರು ಶಾಖೆ ವತಿಯಿಂದ ಎಸ್ಕೆಎಸ್ಸೆಸ್ಸೆಫ್ ಸ್ಥಾಪನಾ ದಿನಾಚರಣೆ ಅತೂರು ಬದ್ರಿಯಾ ಜುಮಾ ಮಸೀದಿ ಪರಿಸರದಲ್ಲಿ ಶುಕ್ರವಾರ ನಡೆಯಿತು.

ಜಮಾಅತ್ ಅಧ್ಯಕ್ಷರಾದ ಬಿ ಕೆ ಅಬ್ದುಲ್ ರಝಕ್ ಹಾಗೂ ಎಸ್ಕೆಎಸ್ಸೆಸ್ಸೆಫ್ ಶಾಖೆ ಅಧ್ಯಕ್ಷರಾದ ಬಿ ಆರ್ ಅಬ್ದುಲ್ ಖಾದರ್ ದ್ವಜಾರೋಹಣ ನೆರವೇರಿಸಿದರು.

ಅತೂರು ಬದ್ರಿಯಾ ಜುಮಾ ಮಸೀದಿಯ ಮುದರಿಸ್ ಸೈಯದ್ ಮೊಹಮ್ಮದ್ ಜುನೈದ್ ಜಿಫ್ರಿ ತಂಗಳ್ ಫೈಝಿ ಅತೂರು ದುಆ ಹಾಗೂ ಸಂದೇಶ ಭಾಷಣ ಮಾಡಿದರು. ಎಸ್ಕೆಎಸ್ಸೆಸ್ಸೆಫ್ ದುಬೈ ಸಮಿತಿಯ ಕಾರ್ಯಧ್ಯಕ್ಷ ಎ ಎಸ್ ರಫೀಕ್ ಅತೂರು ಪ್ರಸ್ಥಾವಿಕ ಭಾಷಣ ಮಾಡಿದರು.
ಝಕರಿಯ ಮುಸ್ಲಿಯಾರ್ ಸ್ವಾಗತಿಸಿ, ಕಾರ್ಯಕ್ರಮವನ್ನು ನಿರೂಪಿಸಿದರು. ಸಿದ್ದಿಕ್ ನೀರಜೆ ವಂದಿಸಿದರು.

ಬಳಿಕ ಮಸೀದಿ ಬಳಿ ಸ್ವಚ್ಛತೆ ಕಾರ್ಯಕ್ರಮ ನಡೆಯಿತು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News