ಎಸ್ಸೆಸ್ಸೆಫ್ ಸುರತ್ಕಲ್ ಡಿವಿಷನ್ನಿಂದ ತರ್ಬಿಯ ಕ್ಯಾಂಪ್
ಸುರತ್ಕಲ್, ಫೆ.21:ಎಸ್ಸೆಸ್ಸೆಫ್ ಸುರತ್ಕಲ್ ಡಿವಿಜನ್ ತರ್ಬಿಯ ಕ್ಯಾಂಪ್ -21 ಡಿವಿಷನ್ ಎಕ್ಸಿಕ್ಯೂಟಿವ್ - ಸೆಕ್ಟರ್ ಎಕ್ಸಿಕ್ಯೂಟಿವ್ ಸಂಗಮವು ಡಿವಿಷನ್ ಅಧ್ಯಕ್ಷ ಹನೀಫ್ ಅಹ್ಸನಿ ಶೇಡಿಗುರಿ ಅವರ ಅಧ್ಯಕ್ಷತೆಯಲ್ಲಿ ಕಾಟಿಪಳ್ಳ ಸುನ್ನಿ ಸೆಂಟರ್ನಲ್ಲಿ ಇತ್ತೀಚೆಗೆ ನಡೆಯಿತು.
ಸುರತ್ಕಲ್ ಸೆಕ್ಟರ್ ಅಧ್ಯಕ್ಷ ರಶೀದ್ ಸಅದಿ ಅಂಗರಗುಂಡಿ ಹಾಗೂ ಮುಲ್ಕಿ ಸೆಕ್ಟರ್ ಅಧ್ಯಕ್ಷ ಶಂಸುದ್ದೀನ್ ಅಹ್ಸನಿ ಬಳ್ಕುಂಜೆ ಖಿರಾಅತ್ ಪಠಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಎಸ್ಸೆಸ್ಸೆಫ್ ದ.ಕ.ಜಿಲ್ಲಾ ವೆಸ್ಟ್ ಸದಸ್ಯ ಉಮರುಲ್ ಫಾರೂಕ್ ಸಖಾಫಿ ಕಾಟಿಪಳ್ಳ ಉದ್ಘಾಟಿಸಿದರು.
ಸಂಪನ್ಮೂಲ ವ್ಯಕ್ತಿಯಾಗಿ ತೈಬ ಗಾರ್ಡನ್ ಬಂಗ್ಲಗುಡ್ಡೆ ಇದರ ಪ್ರಿನ್ಸಿಪಾಲ್ ಅಹ್ಮದ್ ಶರೀಫ್ ಸಅದಿ ಅಲ್ ಕಾಮಿಲ್ ಕಿಲ್ಲೂರು ವಿಷಯ ಮಂಡನೆ ಮಾಡಿದರು. ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಕಾರ್ಯದರ್ಶಿ ಹುಸೈನ್ ಸಅದಿ ಹೊಸ್ಮಾರ್, ದ.ಕ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೈದರ್ ಅಲಿ 4ನೇ ಬ್ಲಾಕ್, ಕೆಸಿಎಫ್ ನಾಯಕ ಫಾರೂಕ್ ಕಾಟಿಪಳ್ಳ, ಡಿವಿಜನ್ ಕಾರ್ಯದರ್ಶಿ ಸಿನಾನ್ ಸಖಾಫಿ 3ನೇ ಬ್ಲಾಕ್, ಅನ್ಸಾರ್ 9ನೇ ಬ್ಲಾಕ್, ಹನೀಫ್ ಸುರತ್ಕಲ್, ಸಫ್ವಾನ್ ಜಂಕ್ಷನ್, ಇಲ್ಯಾಸ್ ಜಂಕ್ಷನ್, ಇರ್ಷಾದ್ ಪಕ್ಷಿಕೆರೆ ಮತ್ತಿತರರು ಉಪಸ್ಥಿತರಿದ್ದರು.
ಸುರತ್ಕಲ್ ಡಿವಿಷನ್ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ತನ್ಸೀರ್ 4ನೇ ಬ್ಲಾಕ್ ಸ್ವಾಗತಿಸಿದರು. ಕೋಶಾಧಿಕಾರಿ ತೌಸೀಫ್ ಬದ್ರಿಯನಗರ ವಂದಿಸಿದರು.