ಶಿವಮೊಗ್ಗ: ಚಾಕು ತೋರಿಸಿ ಕೊಲೆ ಬೆದರಿಕೆ; ದೂರು

Update: 2021-02-22 07:33 GMT

ಶಿವಮೊಗ್ಗ: ಕ್ಯಾಂಟೀನ್‍ನಲ್ಲಿ ಟೀ ಕುಡಿದು, ರಸ್ತೆ ಬದಿಯಲ್ಲಿ ನಿಂತಿದ್ದ ಯುವಕರಿಗೆ ಚಾಕು ತೋರಿಸಿ ಕೊಲೆ ಬೆದರಿಕೆ ಒಡ್ಡಲಾಗಿದೆ. ಅಲ್ಲಿಂದ ದುಷ್ಕರ್ಮಿಗಳು ಕಾಲ್ಕಿತ್ತಿದ್ದಾರೆ ಎಂದು ಆರೋಪಿಸಲಾದ ಘಟನೆ ಅಣ್ಣಾನಗರ ಮುಖ್ಯ ರಸ್ತೆಯಲ್ಲಿ ಸಂಭವಿಸಿದೆ.

ಗಾರೆ ಕೆಲಸ ಮಾಡುವ ನವೀನ್ ರಾಜ್ ಎಂಬವರು ತಮ್ಮ ಸ್ನೇಹಿತರಾದ ಪ್ರಭು, ಹರೀಶ ಮತ್ತು ಸಂತೋಷ ಎಂಬವರ ಜೊತೆಗೆ ಸಂಜೆ ಟೀ ಕುಡಿದು, ಮಾತನಾಡುತ್ತ ನಿಂತಿದ್ದಾಗ ಬೆದರಿಕೆ ಒಡ್ಡಲಾಗಿದೆ ಎಂದು ದೂರಲಾಗಿದೆ.

ದಿಢೀರನೆ ಬಂದ ಇಬ್ಬರು ಯುವಕರು ಚಾಕು ತೋರಿಸಿ, ಬೆದರಿಕೆ ಒಡ್ಡಿದ್ದಾರೆ. ಹಲ್ಲೆಗೂ ಯತ್ನಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಹಲ್ಲೆ ನಡೆಸಲು ಮುಂದಾದವರನ್ನು ಚಪ್ಪಡಿ ಮತ್ತು ಶಫಾನ್ ಎಂದು ಗುರುತಿಸಲಾಗಿದೆ. ಈ ಸಂಬಂಧ ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News