ಉಡುಪಿ ಸುಲ್ತಾನ್ ಗೋಲ್ಡ್‌ನಲ್ಲಿ ಟ್ರೆಡಿಷನಲ್ ಡೈಮಂಡ್ ತನ್ಮನಿಯಾ ಪ್ರದರ್ಶನಕ್ಕೆ ಚಾಲನೆ

Update: 2021-02-22 14:40 GMT

ಉಡುಪಿ, ಫೆ.22: ಸುಲ್ತಾನ್ ಡೈಮಂಡ್ಸ್ ಆ್ಯಂಡ್ ಗೋಲ್ಡ್ ಉಡುಪಿ ಶೋರೂಮ್‌ನಲ್ಲಿ ಫೆ.27ರವರೆಗೆ ಹಮ್ಮಿಕೊಳ್ಳಲಾಗಿರುವ ಟ್ರೆಡಿಷನಲ್ ಡೈಮಂಡ್ ತನ್ಮನಿಯಾ ಪ್ರದರ್ಶನಕ್ಕೆ ಇಂದು ಚಾಲನೆ ನೀಡಲಾಯಿತು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಉಡುಪಿಯ ಬಲ್ಲಾಳ್ ಫೈನಾನ್ಸ್ ಆ್ಯಂಡ್ ಇನ್ವೆಸ್ಟ್‌ಮೆಂಟ್‌ನ ಎನ್.ಮುರಳೀಧರ ಬಲ್ಲಾಳ್ ದಂಪತಿ, ಕಾಪು ಉದ್ಯಮಿ ಶ್ರೀರಾಮ್ ರಾವ್ ಮತ್ತು ಕುಟುಂಬ, ನಾವುಂದ ಟಿ.ಎಫ್.ಎನ್. ಫಿಶರೀಸ್‌ನ ಮುಸ್ತಫಾ ಮತ್ತು ಕುಟುಂಬ, ಉಡುಪಿ ಕಾರ್ಸ್‌ನ ಅಶ್ರಫ್ ಮತ್ತು ಕುಟುಂಬ, ಉದ್ಯಮಿ ಅಶ್ರಫ್ ಬೀಜಾಡಿ, ಬಜಗೋಳಿಯ ಅಗ್ನಿಲ ಸರ್ವಿಸ್ ಸ್ಟೇಶನ್ ಶ್ರಾವಣ್ ಜೈನ್ ದಂಪತಿ ದೇಶವಿದೇಶಗಳ ಡೈಮಂಡ್ ತನ್ಮನಿಯಾವನ್ನು ಅನಾವರಣಗೊಳಿಸಿದರು.

ಸುಲ್ತಾನ್ ಗೋಲ್ಡ್‌ನ ಉಡುಪಿ ಬ್ರಾಂಚ್ ಮೆನೇಜರ್ ಮುಹಮ್ಮದ್ ಅಜ್ಮಲ್ ಸ್ವಾಗತಿಸಿದರು. ಫ್ಲೋರ್ ಮೆನೇಜರ್ ಸಿದ್ದೀಕ್ ಹಸನ್ ಕಾರ್ಯಕ್ರಮ ನಿರೂಪಿಸಿದರು. ಪಿಆರ್‌ಓ ಮಂಜುನಾಥ್ ಅಮೀನ್ ವಂದಿಸಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಅಸಿಸ್ಟೆಂಟ್ ಸೇಲ್ಸ್ ಮೆನೇಜರುಗಳಾದ ಶಮಿಲ್ ಅಬ್ದುಲ್ ಖಾದರ್ ಮತ್ತು ನಝೀರ್ ಅಡ್ಡೂರು ಮತ್ತು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News