ಪೊಗರು ಚಿತ್ರದಿಂದ ಹಿಂದೂ ಭಾವನೆಗೆ ಧಕ್ಕೆ: ಸಂಸದೆ ಕರಂದ್ಲಾಜೆ

Update: 2021-02-23 16:09 GMT

ಉಡುಪಿ, ಫೆ. 23: ಪೊಗರು ಚಿತ್ರ ಹಿಂದೂ ಸಮಾಜದ ಭಾವನೆಗೆ ಧಕ್ಕೆ ಮಾಡಿದೆ. ಪೂಜಾ ಪದ್ಧತಿ, ಅರ್ಚಕರಿಗೆ ಅವಮಾನ ಮಾಡಿದೆ. ಚಿತ್ರದಿಂದ ಶ್ರದ್ಧೆ, ಆಚಾರ ವಿಚಾರಕ್ಕೆ ಧಕ್ಕೆಯಾಗಿದೆ ಎಂದು ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ.

ಉಡುಪಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಸಿನೆಮಾದ ಆಕ್ಷೇಪಾರ್ಹ ದೃಶ್ಯಗಳಿಗೆ ಸೆನ್ಸಾರ್ ಯಾಕೆ ಕತ್ತರಿ ಹಾಕಿಲ್ಲ ? ಸೆನ್ಸಾರ್ ಮಂಡಳಿ ನಡೆ ಸಂಶಯಕ್ಕೆ ಎಡೆ ಮಾಡಿದೆ. ಪ್ರಚಾರ ಗಿಟ್ಟಿಸಿ ಹಣ ಮಾಡ ಬಹುದು ಎಂದು ಅಂದುಕೊಂಡಿರಬಹುದು. ಇಂತಹ ಮಾನಸಿಕತೆಯನ್ನು ನಾವು ತೊಡೆದುಹಾಕ ಬೇಕು. ಪೊಗರು ಚಲನಚಿತ್ರ ಪ್ರದರ್ಶನಕ್ಕೆ ನನ್ನ ವಿರೋಧ ಇದೆ ಎಂದರು.

ಚಿತ್ರವನ್ನು ವಾಪಸ್ ಪಡೆದರೆ ಸೆನ್ಸಾರ್ ಮಾಡಿ ಪ್ರದರ್ಶನ ನಿಲ್ಲಿಸಲು ಸರಕಾರಕ್ಕೆ ನಾನು ಒತ್ತಾಯ ಮಾಡುತ್ತಿದ್ದೇನೆ. ಚಿತ್ರದ ಕೆಲ ದೃಶ್ಯಗಳನ್ನು ಕಂಡು ನನಗೆ ಬಹಳ ನೋವಾಗಿದೆ. ನಿಮ್ಮ ದಾರ್ಷ್ಟ್ಯವನ್ನು ಬೇರೆ ಧರ್ಮಗಳಿಗೆ ತೋರಿಸಲು ಶಕ್ತಿ ಇದೆಯೇ ಇದು ಕೇವಲ ಬ್ರಾಹ್ಮಣರು ವಿರೋಧಿ ಸುವ ವಿಚಾರ ಅಲ್ಲ ಪೂರ್ಣ ಹಿಂದೂ ಸಮಾಜ ಎದ್ದು ನಿಂತು ವಿರೋಧಿಸಬೇಕು ಅವರು ಆಕ್ರೋಶ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News