ಹೊಳೆಗೆ ಬಿದ್ದು ಮಹಿಳೆ ಮೃತ್ಯು

Update: 2021-02-23 16:11 GMT

ಬ್ರಹ್ಮಾವರ, ಫೆ.23: ಹೊಳೆಯಿಂದ ನೀರು ತರಲು ಹೋದ ಮಹಿಳೆ ಯೊಬ್ಬರು ಅಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದು ಮೃತಪಟ್ಟ ಘಟನೆ ಫೆ.22ರಂದು ಬೆಳಗ್ಗೆ ನಡೆದಿದೆ.

ಮೃತರನ್ನು ಕೊಕ್ಕರ್ಣೆ ಸೊಳ್ಳೆಕಟ್ಟು ನಿವಾಸಿ ಚಂದು ಮರಕಾಲ್ತಿ (60) ಎಂದು ಗುರುತಿಸಲಾಗಿದೆ. ಇವರು ಮನೆಯ ಹತ್ತಿರದಲ್ಲಿರುವ ಹೊಳೆಯಿಂದ ಕೊಡ ಪಾನದಲ್ಲಿ ನೀರು ತರಲು ಹೋಗಿದ್ದು, ಈ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಆಯತಪ್ಪಿ ನೀರಿನಲ್ಲಿ ಮುಳುಗಿದ್ದರು. ಕೂಡಲೇ ಇವರನ್ನು ಮೇಲಕ್ಕೆ ಎತ್ತಿದ್ದ ಸ್ಥಳೀಯರು, ಬ್ರಹ್ಮಾವರ ಖಾಸಗಿ ಆಸ್ಪತ್ರೆಗೆ ಸಾಗಿಸಿದ್ದು, ಪರೀಕ್ಷಿಸಿದ ವೈದ್ಯರು ಚಂದು ಮರಕಾಲ್ತಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News