ವಿಚಾರವಾದಿ ನರೇಂದ್ರ ನಾಯಕ್ಗೆ ಬಾಲವಿಕಾಸ ಅಕಾಡಮಿ ಪ್ರಶಸ್ತಿ
Update: 2021-02-24 14:10 GMT
ಮಂಗಳೂರು, ಫೆ.24: ಕರ್ನಾಟಕ ರಾಜ್ಯ ಬಾಲವಿಕಾಸ ಅಕಾಡಮಿಯಿಂದ ನೀಡುವ ಪ್ರತಿಷ್ಠಿತ ಗೌರವ ಪ್ರಶಸ್ತಿಗೆ ಖ್ಯಾತ ವಿಚಾರವಾದಿ ಮತ್ತು ಭಾರತೀಯ ವಿಚಾರವಾದಿ ಸಂಘಗಳ ಒಕ್ಕೂಟದ ಅಧ್ಯಕ್ಷ ಪ್ರೊ. ನರೇಂದ್ರ ನಾಯಕ್ ಅವರನ್ನು ಆಯ್ಕೆ ಮಾಡಲಾಗಿದೆ.
ಯುವ ಮನಸುಗಳನ್ನು ಸಂವೇದನಾಶೀಲಗೊಳಿಸುವ ಮತ್ತು ಜಾಗೃತಗೊಳಿಸುವ ವಿವಿಧ ಕಾರ್ಯಕ್ರಮ ಹಾಗೂ ಚಟುವಟಿಕೆಗಳನ್ನು ಪ್ರೊ. ನಾಯಕ್ ನಿರಂತರವಾಗಿ ಆಯೋಜಿಸುತ್ತಾ ಬಂದಿದ್ದಾರೆ. ಅವರು ನೀಡಿದ ಅತ್ಯುತ್ತಮ ಕೊಡುಗೆಗಳನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. 2004ರಲ್ಲಿ ಕಲಬುರ್ಗಿಯಲ್ಲಿ ಮೂಢನಂಬಿಕೆಯಿಂದಾಗಿ ಬಾಲಕಿಯನ್ನು ಬಲಿ ಕೊಡಲಾಗಿತ್ತು. ಇದನ್ನು ಪ್ರಬಲವಾಗಿ ವಿರೋಧಿಸಿದ ಪ್ರೊ.ನಾಯಕ್, ಅಂದಿನಿಂದಲೇ ಮೂಢನಂಬಿಕೆ ವಿರೋಧಿ ಕ್ರಿಯಾಶೀಲತೆಯ ಹೋರಾಟಕ್ಕೆ ನಾಂದಿ ಹಾಡಿದರು.