ಹೊಳೆಗೆ ಬಿದ್ದು ಮೃತ್ಯು

Update: 2021-02-24 16:01 GMT

ಶಂಕರನಾರಾಯಣ, ಫೆ.24: ವ್ಯಕ್ತಿಯೊಬ್ಬರು ಅಕಸ್ಮಿಕವಾಗಿ ಕಾಲು ಜಾರಿ ಹೊಳೆಗೆ ಬಿದ್ದು ಮೃತಪಟ್ಟ ಘಟನೆ ಹಾಲಾಡಿ ಗ್ರಾಮದ ಮುಡವಳ್ಳಿ ಎಂಬಲ್ಲಿ ನಡೆದಿದೆ.

ಮೃತರನ್ನು 76 ಹಾಲಾಡಿ ಗ್ರಾಮದ ಮಡವಳ್ಳಿ ನಿವಾಸಿ ನಾಗು ಕುಲಾಲ್ (65) ಎಂದು ಗುರುತಿಸಲಾಗಿದೆ. ಇವರು ಫೆ.2ರಂದು ಹೊಲಕ್ಕೆ ದರಲೆ ತರಲು ಹೋದವರು ವಾಪಸು ಮನೆಗೆ ನಾಪತ್ತೆಯಾಗಿದ್ದರು.

ಫೆ.23ರಂದು ಅಪರಾಹ್ನ ಇವರ ಮೃತದೇಹ ದಬ್ಬಾಡಿ ಹೊಳೆಯ ನೀರಿನಲ್ಲಿ ಪತ್ತೆಯಾಗಿದೆ. ಇವರು ಅಕಸ್ಮಿಕವಾಗಿ ಕಾಲು ಜಾರಿ ಹೊಳೆಗೆ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿರ ಬಹುದು ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News