ಬೋಟಿನಿಂದ ನೀರಿಗೆ ಬಿದ್ದು ಮೃತ್ಯು
Update: 2021-02-26 16:23 GMT
ಮಲ್ಪೆ, ಫೆ.26: ಮಲ್ಪೆ ಬಂದರಿನ ಬಾಪುತೋಟ ಹಳೆ ಕಚೇರಿ ಬಳಿ ದಕ್ಕೆಯಲ್ಲಿ ನಿಲ್ಲಿಸಿದ್ದ ಬೋಟಿನಲ್ಲಿ ಮಲಗಿದ್ದ ಮೀನು ಕಾರ್ಮಿಕರೊಬ್ಬರು ಅಕಸ್ಮಿಕವಾಗಿ ಜಾರಿ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ.
ಮೃತರನ್ನು ಕೊಪ್ಪಳ ಜಿಲ್ಲೆಯ ಶಿವನಗೌಡ(50) ಎಂದು ಗುರುತಿಸಲಾಗಿದೆ. ಇವರು ಮಲ್ಪೆ ಬಂದರಿನಲ್ಲಿ ವಿಷ್ಣು ಚಕ್ರ ಬೋಟಿನಲ್ಲಿ ಕೆಲಸ ಮಾಡಿ ಕೊಂಡಿದ್ದು, ಫೆ.25ರಂದು ರಾತ್ರಿ ಬೋಟಿನಲ್ಲಿ ಮಲಗಿದ್ದ ಇವರು, ಆಕಸ್ಮಿಕವಾಗಿ ಕಾಲು ಜಾರಿ ದಕ್ಕೆಯ ನೀರಿಗೆ ಬಿದ್ದು ನಾಪತ್ತೆಯಾಗಿದ್ದರು.
ಫೆ.26ರಂದು ಬೆಳಗ್ಗೆ ಬಾಪುತೋಟ ದಕ್ಕೆಯ ನೀರಿನಲ್ಲಿ ಇವರ ಮೃತದೇಹ ಪತ್ತೆಯಾಗಿದೆ. ಈ ಬಗ್ಗೆ ಮಲ್ಪೆಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.