ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಜಂಟಿ ಆಶ್ರಯದಲ್ಲಿ ರಕ್ತದಾನ ಶಿಬಿರ

Update: 2021-02-26 17:54 GMT

ಮಂಗಳೂರು : ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಜಂಟಿ ಆಶ್ರಯದಲ್ಲಿ ವಿವಿಧ ಸಂಘಟನೆಗಳ ಸಹಭಾಗಿತ್ವದಲ್ಲಿ ಮಾರ್ಚ್ ತಿಂಗಳಲ್ಲಿ ದ.ಕ ಜಿಲ್ಲೆಯ ಐದು ಸ್ಥಳಗಳಲ್ಲಿ ಸಾರ್ವಜನಿಕ ರಕ್ತದಾನ ಶಿಬಿರ ನಡೆಯಲಿದೆ.

ಶಿಬಿರವು ಮಾರ್ಚ್ 2 ರಂದು ಭಾರತೀಯ ಮಾನವ ಹಕ್ಕು ಸಂರಕ್ಷಣಾ ವೇದಿಕೆ ಮತ್ತು ಎಸ್.ಪಿ.ಎಲ್ ಮಂಗಳೂರು ಇದರ ಜಂಟಿ ಆಶ್ರಯದಲ್ಲಿ ಬಿ.ಸಿ.ರೊಡ್ ಬಸ್ತಿಪಡ್ಪುವಿನ ಮೇಲಂತ ಮೈದಾನದಲ್ಲಿ ನಡೆಯಲಿದೆ.

ಮಾರ್ಚ್ 7 ರಂದು ಡೌರಿ ಫ್ರೀ ನಿಕಾಹ್ ಮತ್ತು ಎಚ್.ಎಫ್.ಸಿ ಹರೇಕಳ ಇದರ ಜಂಟಿ ಆಶ್ರಯದಲ್ಲಿ ಬೈತಾರ್ ಮುಹಿಯುದ್ದೀನ್ ಜುಮಾ ಮಸೀದಿ ವಠಾರದಲ್ಲಿ ಹಾಗೂ ಮೈ ಲೈಫ್ ಮೆಡಿಕಲ್ ಸೆಂಟರ್ ಬಲ್ಮಠ ಇದರ ಉದ್ಘಾಟನೆಯ ಪ್ರಯುಕ್ತ ಬಲ್ಮಠದ ಒಬೇರ್ಲೆ ಟವರ್ ನಲ್ಲಿ ನಡೆಯಲಿದೆ.

ಮಾರ್ಚ್ 14 ರಂದು ಅಸಾಸುಲ್ ಇಸ್ಲಾಂ ಸ್ಟೂಡೆಂಟ್ಸ್ ಫೇಡರೇಶನ್ ಪಲ್ಲಮಜಲು ಇದರ ಜಂಟಿ ಆಶ್ರಯದಲ್ಲಿ ಪಲ್ಲಮಜಲು ಹಯಾತುಲ್ ಇಸ್ಲಾಂ ಮದರಸ ವಠಾರದಲ್ಲಿ ನಡೆಯಲಿದೆ. ಹಾಗೂ ಮಾರ್ಚ್ 21 ರಂದು ಬ್ಯಾರಿ ಸಂಗೀತ ಕಲಾವಿದರ ಸಂಘ ಇದರ ಜಂಟಿ ಆಶ್ರಯದಲ್ಲಿ ಕಂಕನಾಡಿಯ ಟ್ಯಾಲೆಂಟ್ ರೀಸರ್ಚ್ ಫೌಂಡೇಶನ್ ಸಭಾಂಗಣದಲ್ಲಿ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News