ಸುಳ್ಯ ಬಿಜೆಪಿಯಲ್ಲಿ ಅಸಮರ್ಥ ನಾಯಕತ್ವ, ಬಂಡಾಯದ ಲಾಭ ಪಡೆಯುತ್ತೇವೆ: ‌ಭರತ್ ಮುಂಡೋಡಿ

Update: 2021-02-27 16:59 GMT

ಸುಳ್ಯ: ಬಿಜೆಪಿಯ ಅಧಿಕೃತ ಅಭ್ಯರ್ಥಿಗಳ ವಿರುದ್ಧ ಸ್ಪರ್ಧಿಸಿ ಗೆದ್ದವರ‌ ಮೇಲೆ ಕೂಡ ಯಾವುದೇ ಕ್ರಮ ಕೈಗೊಳ್ಳಲು ಸುಳ್ಯ ಬಿಜೆಪಿ ನಾಯಕತ್ವ ಅಸಮರ್ಥವಾಗಿದೆ. ಸುಳ್ಯ ಬಿಜೆಪಿಯಲ್ಲಿ ಈಗ ಅಸಮರ್ಥ ನಾಯಕತ್ವ ಇದೆ. ಬಿಜೆಪಿಯ ಒಳಗಿನ ಭಿನ್ನಾಭಿಪ್ರಾಯ ಬಂಡಾಯದ ಪೂರ್ತಿ ಲಾಭವನ್ನು ಕಾಂಗ್ರೆಸ್ ಪಡೆಯಲು ಹಳ್ಳಿ ಹಳ್ಳಿಗಳಲ್ಲಿ ಕೆಲಸ ಮಾಡುತ್ತೇವೆ ಎಂದು ಕೆಪಿಸಿಸಿ ಮಾಜಿ ಕಾರ್ಯದರ್ಶಿ ಭರತ್ ಮುಂಡೋಡಿ ಹೇಳಿದ್ದಾರೆ.‌

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ನ ರಾಜ್ಯ ಮಟ್ಟದ ನಾಯಕರು ಕೂಡ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ನೇತೃತ್ವದಡಿಯಲ್ಲಿ ಸಾಮಾನ್ಯ ಕಾರ್ಯಕರ್ತರಂತೆ ಕೆಲಸ ಮಾಡುತ್ತೇವೆ. ಕಾಂಗ್ರೆಸ್ ನಲ್ಲಿ ಯಾವುದೇ ಭಿನ್ನಾಭಿಪ್ರಾಯ, ಬಂಡಾಯ ಇಲ್ಲ. ಮೀಸಲು ಕ್ಷೇತ್ರವಾದ ಸುಳ್ಯದಲ್ಲಿ ನಾಯಕರಿಗೆ ಯಾವುದೇ ಆಸೆ ಆಕಾಂಕ್ಷೆಗಳು ಇಲ್ಲ ಆದುದರಿಂದ‌ ಭಿನ್ನಮತ, ಲಾಬಿ ಮಾಡಬೇಕಾದ ಅಗತ್ಯ ಇಲ್ಲ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News