ಸಾಂಸ್ಕೃತಿಕ ಪ್ರತಿಭೆಗಳಿಗೆ ಪ್ರೋತ್ಸಾಹ ಶ್ಲಾಘನೀಯ : ಸದಾನಂದ ಶೆಟ್ಟಿ

Update: 2021-02-28 10:49 GMT

ಮಂಗಳೂರು : ಸಮಾಜದಲ್ಲಿ ಉತ್ತಮ ಕಾರ್ಯ, ಚಟುವಟಿಕೆಗಳನ್ನು ಮಾಡುವುದರ ಮೂಲಕ  ರೋಟರಿಯಂತಹ ಸಂಸ್ಥೆಗಳು ರಂಗ ತರಂಗ ಕಾರ್ಯಕ್ರಮದ ಮೂಲಕ ತೆರೆ ಮರೆಯಲ್ಲಿರುವ ಸಾಂಸ್ಕ್ರತಿಕ ಪ್ರತಿಭೆಗಳನ್ನು ಗುರುತಿ ಸುವ ಕಾರ್ಯವನ್ನು ಮಾಡುತ್ತಿರುವುದು ಶ್ಲಾಘನೀ ಯ ಎಂದು  ಮಂಗಳೂರು ಶ್ರೀ ದೇವಿ ಎಜುಕೇಶನ್ ಟ್ರಸ್ಟ್ ನ ಅಧ್ಯಕ್ಷ  ಎ.ಸದಾ ನಂದ ಶೆಟ್ಟಿ ತಿಳಿಸಿದ್ದಾರೆ.

ಅವರು ಇಂದು ರೋಟರಿ ಕ್ಲಬ್ ಮಂಗಳೂ ರು ಸೆಂಟ್ರಲ್ ಝೋನ್-2,ಆರ್ ಐ.ಜಿಲ್ಲೆ 3181 ವತಿಯಿಂದ ನಗರದ ಸೈಂಟ್ ಅಲೋಶಿಯಸ್ ಕಾಲೇಜು ಲೊಯೋಲಾ ಸಭಾಂಗಣದಲ್ಲಿಂದು ನಡೆದ ರಂಗ ತರಂಗ ಜಿಲ್ಲಾ ಸಾಂಸ್ಕೃತಿಕ ಸ್ಪರ್ದೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
 ಕಲೆ ಸಂಸ್ಕ್ರತಿ ಉಳಿಯ ಬೇಕಾದರೆ,ಮುಂದಿನ ಪೀಳಿಗೆ ಈ ಬಗ್ಗೆ ಆಸಕ್ತಿ ವಹಿಸಬೇಕಾದರೆ ಕಲೆಯನ್ನು  ಪ್ರೋತ್ಸಾಹಿಸು ವವರು ಮುಖ್ಯ ರಾಗುತ್ತಾರೆ ಎಂದು ಸದಾನಂದ ಶೆಟ್ಟಿ ತಿಳಿಸಿದ್ದಾರೆ.

ಮಂಗಳೂರು ಕೋಸ್ಟಲ್ ವುಡ್ ನಿರ್ಮಾಪಕ, ನಿರ್ದೇಶಕರಾದ ದೇವ್ ದಾಸ್ ಕಾಪಿಕಾಡ್ ,ಆರ್.ಐ.ಡಿ 3181,ರ ಝೋನ್ -2ರ ಸಹಾಯಕ ರಾಜ್ಯಪಾಲ ರೊಟೇರಿಯನ್ ಎಮ್.ಪಿ.ಎಚ್.ಎಫ್ ಆನಂದ ಶೆಟ್ಟಿ ಉಪಸ್ಥಿತರಿದ್ದರು.ರಂಗತರಂಗ ಜಿಲ್ಲಾ ಸಂಸ್ಕೃತಿಕ ಸಮಿತಿಯ ಅಧ್ಯಕ್ಷ  ರೊಟೇರಿಯನ್ ಪಿ.ಪಿ ಪಿ.ಎಚ್.ಎಫ್ ರಾಜ್ ಗೋಪಾಲ್ ರೈ ಪ್ರಾಸ್ತವಿಕವಾಗಿ ಮಾತನಾಡಿ ಸ್ವಾಗತಿಸಿದರು.

ರಂಗ ತರಂಗ ಜಿಲ್ಲಾ ಸಾಂಸ್ಕೃತಿಕ ಸಮಿತಿಯ ಉಪಾಧ್ಯಕ್ಷರಾದ ರೊಟೇರಿಯನ್ ಎಮ್.ಪಿ.ಎಚ್.ಎಫ್ ಶ್ರೀಕಾಂತ್ ನಾಯಕ್ ಮತ್ತು ಕೆ.ಎಮ್ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.

ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಅಧ್ಯಕ್ಷ ರೊಟೇರಿಯನ್ ಪಿ.ಪಿ ಪ್ರಕಾಶ್ ಚಂದ್ರ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News