ರಂಗ ತರಂಗ ಜಿಲ್ಲಾ ಸಾಂಸ್ಕೃತಿಕ ಸ್ಪರ್ಧೆ
Update: 2021-02-28 12:30 GMT
ಮಂಗಳೂರು, ಫೆ.28: ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ರೆನ್-2,ಆರ್ಐ ಜಿಲ್ಲೆ 3181 ವತಿಯಿಂದ ರಂಗ ತರಂಗ ಜಿಲ್ಲಾ ಸಾಂಸ್ಕೃತಿಕ ಸ್ಪರ್ಧೆಯು ರವಿವಾರ ನಡೆಯಿತು.
ಶ್ರೀದೇವಿ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಎ.ಸದಾನಂದ ಶೆಟ್ಟಿ ಮಾತನಾಡಿ ರೋಟರಿ ಸಂಸ್ಥೆಯು ಸಮಾಜದಲ್ಲಿ ಉತ್ತಮ ಕಾರ್ಯ, ಚಟುವಟಿಕೆಗಳನ್ನು ಮಾಡುವುದರ ಮೂಲಕ ಮುಂಚೂಣಿಯಲ್ಲಿದೆ. ರಂಗ ತರಂಗ ಕಾರ್ಯಕ್ರಮದ ಮೂಲಕ ಪ್ರತಿಭೆಗಳನ್ನು ಗುರುತಿಸುವ ಕಾರ್ಯವನ್ನು ಮಾಡುತ್ತಿರುವುದು ಶ್ಲಾಘನೀಯ ಎಂದರು.
ಮಂಗಳೂರು ಕೋಸ್ಟಲ್ ವುಡ್ ನಿರ್ಮಾಪಕ, ನಿರ್ದೇಶಕ ದೇವದಾಸ್ ಕಾಪಿಕಾಡ್, ಆರ್ಐ 3181 ರೆನ್ 2ರ ಸಹಾಯಕ ರಾಜ್ಯಪಾಲ ರೊಟೇರಿಯನ್ ಆನಂದ ಶೆಟ್ಟಿ ಉಪಸ್ಥಿತರಿದ್ದರು.
ರಂಗತರಂಗ ಜಿಲ್ಲಾ ಸಾಂಸ್ಕೃತಿಕ ಸಮಿತಿಯ ಅಧ್ಯಕ್ಷ ರಾಜ್ಗೋಪಾಲ್ ಸ್ವಾಗತಿಸಿದರು. ಉಪಾಧ್ಯಕ್ಷ ರೊಟೇರಿಯನ್ ಶ್ರೀಕಾಂತ್ ನಾಯಕ್, ಕೆ.ಎಂ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು. ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಅಧ್ಯಕ್ಷ ರೊಟೇರಿಯನ್ ಪಿ.ಪಿ ಪ್ರಕಾಶ್ಚಂದ್ರ ವಂದಿಸಿದರು.