ಉಡುಪಿಯಲ್ಲಿ ಮತ್ತಷ್ಟು ಸ್ಕಿಮ್ಮಿಂಗ್ ವಂಚನೆ ಪ್ರಕರಣ ಬೆಳಕಿಗೆ

Update: 2021-02-28 15:40 GMT

ಉಡುಪಿ, ಫೆ.26: ಉಡುಪಿಯಲ್ಲಿ ಬ್ಯಾಂಕ್ ಖಾತೆಗಳಿಂದ ಸ್ಕಿಮ್ಮಿಂಗ್ ನಡೆಸಿ ಹಣ ವಂಚಿಸಿರುವ ಮತ್ತಷ್ಟು ಪ್ರಕರಣ ಬೆಳಕಿಗೆ ಬಂದಿದೆ. ಕೊಡವೂರು ಮಧ್ವನಗರದ ಪ್ರೀತಿ ಎಂ. ಎಚ್‌ಡಿಎಫ್‌ಸಿ ಬ್ಯಾಂಕ್ ಉಡುಪಿ ಶಾಖೆಯ ಖಾತೆಯಿಂದ 2020ರ ನ.17ರಂದು 28,500ರೂ., ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು ನಿವಾಸಿ ಮಸೂದ ಎಂಬವರ ಕೆನರಾ ಬ್ಯಾಂಕ್ ಬಾಳೆಹೊನ್ನೂರು ಶಾಖೆಯ ಖಾತೆಯಿಂದ 2020ರ ನ.17ರಂದು 10500 ರೂ., ಅಂಬಲಪಾಡಿಯ ಶ್ರೀಪತಿ ಬಲ್ಲಾಳ್ ಎಂಬವರು ಸಿಂಡಿಕೇಟ್ ಬ್ಯಾಂಕ್ ಆದಿಉಡುಪಿ ಶಾಖೆಯ ಖಾತೆಯಿಂದ 2020ರ ನ.17ರಂದು 20,500ರೂ. ಹಣವನ್ನು ಸ್ಕಿಮ್ಮಿಂಗ್ ನಡೆಸಿ ವಂಚಿಸಲಾಗಿತ್ತು.

ಮಂಗಳೂರು ಪೊಲೀಸರು ಇತ್ತೀಚೆಗೆ ಸ್ಕಿಮ್ಮಿಂಗ್ ನಡೆಸಿ, ಹಣ ವಂಚಿಸುತ್ತಿದ್ದ ಆರೋಪಿಗಳನ್ನು ಬಂಧಿಸಿರುವುದನ್ನು ತಿಳಿದುಕೊಂಡ ಇವರು, ತಮ್ಮ ಖಾತೆಯಿಂದಲೂ ಇದೇ ರೀತಿಯಾಗಿ ಸ್ಕಿಮ್ಮಿಂಗ್ ನಡೆಸಿ, ಹಣವನ್ನು ವಂಚಿಸಿರಬಹುದೆಂದು ತಿಳಿದು, ಆರೋಪಿಗಳ ಮತ್ತು ಸೂಕ್ತ ಭದ್ರತೆ ನೀಡದ ಬ್ಯಾಂಕ್ ಅಧಿಕಾರಿಗಳ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾರೆ. ಅದರಂತೆ ಉಡುಪಿ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಮೂರು ಪ್ರಕರಣಗಳು ದಾಖಲಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News