ಹೊಳೆಗೆ ಬಿದ್ದು ಮೃತ್ಯು
Update: 2021-03-01 16:35 GMT
ಬೈಂದೂರು, ಮಾ.1: ಕಂಬದಕೋಣೆ ಗ್ರಾಮದ ಎಡಮಾವಿನ ಹೊಳೆಗೆ ಬಿದ್ದು ಕೃಷಿಕರೊಬ್ಬರು ಬಿದ್ದು ಮೃತಪಟ್ಟ ಫೆ.28ರಂದು ಸಂಜೆ ವೇಳೆ ಘಟನೆ ನಡೆದಿದೆ.
ಮೃತರನ್ನು ಹೊಳೆಬಾಗಿಲು ನಿವಾಸಿ ಸುರೇಶ ಪೂಜಾರಿ(51) ಎಂದು ಗುರು ತಿಸಲಾಗಿದೆ. ಕೃಷಿ ಕೆಲಸ ಮುಗಿಸಿ ಮನೆಗೆ ಬರುತ್ತಿರುವಾಗ ಆಕಸ್ಮಿಕವಾಗಿ ಕಾಲು ಜಾರಿ ಹೊಳೆಯ ನೀರಿಗೆ ಬಿದ್ದು ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಮೃತ ದೇಹ ಮಾ.1ರಂದು ಬೆಳಗ್ಗೆ ಪತ್ತೆಯಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.