ಮಂಗಳೂರು : ಮನಪಾ ನೂತನ ಮೇಯರಾಗಿ ಪ್ರೇಮಾನಂದ ಶೆಟ್ಟಿ ಆಯ್ಕೆ

Update: 2021-03-02 09:33 GMT

ಮಂಗಳೂರು ಮಹಾ ನಗರ ಪಾಲಿಕೆಯ 22ನೆ ಅವಧಿಯ ನೂತನ ಮೇಯರ್ ಆಗಿ ಮಂಗಳಾದೇವಿ ವಾರ್ಡ್ ನ  ಪ್ರೇಮಾನಂದ ಶೆಟ್ಟಿ ಹಾಗೂ ಉಪಮೇಯರ್ ಆಗಿ ಕುಂಜತ್ತಬೈಲ್ ವಾರ್ಡ್ ನ ಸುಮಂಗಲಾ ರಾವ್ ಆಯ್ಕೆಯಾಗಿದ್ದಾರೆ.

ಮೇಯರ್ ಸ್ಥಾನಕ್ಕೆ ಬಿಜೆಪಿಯ ಪ್ರೇಮಾನಂದ ಶೆಟ್ಟಿ ಹಾಗೂ ಕಾಂಗ್ರೆಸ್ ನ ಅನಿಲ್ ಕುಮಾರ್ ನಾಮ ಪತ್ರ ಸಲ್ಲಿಸಿದ್ದು, ಕೈ ಎತ್ತುವ ಮೂಲಕ ಅಭ್ಯರ್ಥಿಗಳ ಪರ ಮತ ಚಲಾವಣೆ ಪ್ರಕ್ರಿಯೆ ನಡೆಯಿತು.

60 ಮಂದಿ ಸದಸ್ಯರು, ಸಂಸದರು,  ಸ್ಥಳೀಯ ಶಾಸಕರು ಸೇರಿದಂತೆ ಒಟ್ಟು 64 ಮಂದಿ  ಮತದಾರರಲ್ಲಿ 62 ಮಂದಿ  ಉಪಸ್ಥಿತರಿದ್ದರು. ಅವರಲ್ಲಿ 46 ಮಂದಿ ಪ್ರೇಮಾನಂದ ಶೆಟ್ಟಿ ಪರವಾಗಿ ಮತ ಚಲಾಯಿಸಿದರು. ಅನಿಲ್ ಕುಮಾರ್ ಪರವಾಗಿ 14 ಮತಗಳು ಚಲಾವಣೆಯಾದವು.

ಉಪ ಮೇಯರ್ ಸ್ಥಾನಕ್ಕೆ ಸುಮಂಗಳಾ ಹಾಗೂ ಜೆಸಿಂತಾ ವಿಜಯ ಆಲ್ಫ್ರೆಡ್ ನಾಮಪತ್ರ ಸಲ್ಲಿಸಿದ್ದು, ಸುಮಂಗಳಾ ಪರವಾಗಿ 46 ಹಾಗೂ ಜೆಸಿಂತಾ ಪರವಾಗಿ 14 ಮತಗಳು ಚಲಾವಣೆಯಾದವು. ಎಸ್ ಡಿಪಿಐ ನ ಇಬ್ಬರು ಸದಸ್ಯರು ತಟಸ್ಥವಾಗುಳಿದರು.

ಅಪರ ಜಿಲ್ಲಾಧಿಕಾರಿ ಎಂ.ಜೆ.ರೂಪ ಹಾಗೂ ಉಪ ಆಯುಕ್ತರಾದ ಡಾ.ಸಂತೋಷ್ ಕುಮಾರ್ ಉಪಸ್ಥಿತರಿದ್ದರು. ಶಾಸಕರಾದ ವೇದವ್ಯಾಸ ಕಾಮತ್ ಹಾಗೂ ಡಾ. ಭರತ್ ಶೆಟ್ಟಿ ಚುನಾವಣಾ ಪ್ರಕ್ರಿಯೆ ಯಲ್ಲಿ ಭಾಗವಹಿಸಿ ಮತ ಚಲಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News