ಮಾ.6ರಂದು ಮಂಗಳೂರು ಕಂಬಳ

Update: 2021-03-04 16:26 GMT

ಮಂಗಳೂರು, ಮಾ.4: ಬಂಗ್ರ ಕೂಳೂರಿನ ಗೋಲ್ಡ್ ಪಿಂಚ್ ಸಿಟಿಯಲ್ಲಿ ಮಾ.6 ರಂದು  ಬೆಳಗ್ಗೆ 8.30ಕ್ಕೆ ರಾಮ-ಲಕ್ಷ್ಮಣ ಜೋಡು ಕರೆ ಕಂಬಳ  ಉದ್ಘಾಟನೆ ನಡೆಯಲಿದೆ ಎಂದು ಕಂಬಳ ಸಮಿತಿಯ ಅಧ್ಯಕ್ಷ ಕ್ಯಾ. ಬ್ರಿಜೇಶ್ ಚೌಟ ಸುದ್ದಿ ಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಈ ಬಾರಿಯೂ ಸುಮಾರು 120ರಿಂದ 150 ಜೋಡಿ ಓಟದ ಕೋಣಗಳು ಮಂಗಳೂರು ಕಂಬಳೋತ್ಸವದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.ಇದೇ ಸಂದರ್ಭದಲ್ಲಿ ಕಂಬಳದ (ನಡೆಯುತ್ತಿರುವ) ಛಾಯಾಚಿತ್ರ ಸ್ಪರ್ಧೆ ಹಾಗೂ ಚಿತ್ರಕಲಾ ಸ್ಪರ್ಧೆ ಯನ್ನು ಹಮ್ಮಿಕೊ ಳ್ಳಲಾಗಿದೆ. ಚಿತ್ರಕಲಾ ಸ್ಪರ್ಧೆ 5ವರ್ಷದೊಳಗಿನ ಮಕ್ಕಳಿಗೆ,11-15. ವರ್ಷ ದೊಳಗಿನ ಬಾಲಕ ಬಾಲಕಿಯರಿಗೆ,ಮತ್ತು 16ವರ್ಷ ಮೇಲ್ಪಟ್ಟ ಮುಕ್ತ ವಿಭಾಗದಲ್ಲಿ ನಡೆಯಲಿದೆ.

ಭಾಹವಹಿಸುವವರು ಅದೇ ದಿನ (ಮಾ.6ರಂದು )ಬೆಳಗ್ಗೆ 10ಗಂಟೆಯೊಳಗೆ ಕಂಬಳ ನಡೆಯುವ ಸ್ಥಳದಲ್ಲಿ ನೋಂದಾಯಿಸಲು ಅವಕಾಶವಿದೆ. ಬಂಗ್ರಕೂಳೂರಿನಲ್ಲಿ ಕ್ರತಕವಾಗಿ ನಿರ್ಮಿಸಲಾದ 145ಮೀಟರ್ ಉದ್ದದ ಜೋಡುಕರೆಯಲ್ಲಿ ಮಾ.6ರಂದು ಮಾ.7ರ ಬೆಳಗ್ಗಿನ ವರೆಗೆ ನಡೆಯಲಿದೆ. ಈ ನಡುವೆ ಮಾ.6ರಂದು ಸಂಜೆ 6ಗಂಟೆಗೆ ಸಭಾಕಾ ರ್ಯಕ್ರಮ ನಡೆಯಲಿದೆ.

ಎಂ.ಆರ್.ಜಿ ಗ್ರೂಪ್ ನ ಸಿಎಂಡಿ ಪ್ರಕಾಶ್ ಶೆಟ್ಟಿ ಅಧ್ಯಕ್ಷ ತೆಯಲ್ಲಿ ನಡೆಯುವ ಸಭಾ ಕಾರ್ಯಕ್ರಮ ದಲ್ಲಿ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ, ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಸಂಸದ ನಳಿನ್ ಕುಮಾರ್ ಕಟೀಲ್, ಸಚಿವರಾದ ಸಿ.ಟಿ.ರವಿ, ಅರವಿಂದ ಲಿಂಬಾವಳಿ, ಕೋಟಾ ಶ್ರೀನಿವಾಸ ಪೂಜಾರಿ, ಎಸ್ .ಅಂಗಾರ ಸೇರಿದಂತೆ ಸಂಸದರು, ಶಾಸಕರು, ಮಾಜಿ ಸಚಿವರು ಉದ್ಯಮಿಗಳು ಭಾಗವಹಿಸಲಿದ್ದಾರೆ. ವಿಶೇಷವಾಗಿ ಮಹಾತ್ಮ  ಗಾಂಧಿ ಸೇವಾ ಟ್ರಸ್ಟ್ ನ ಸಂಸ್ಥಾಪಕ ವಿನಯ ಗುರೂಜಿ ‌ಭಾಗವಹಿಸಲಿದ್ದಾರೆ ಎಂದು ಬ್ರಿಜೇಶ್ ಚೌಟ ತಿಳಿಸಿದ್ದಾರೆ. ಮಾ.7ರಂದು ಬೆಳಗ್ಗೆ ಬಹುಮಾನ ವಿತರಣೆ ನಡೆಯಲಿದೆ ಎಂದು ಬ್ರಿಜೇಶ್ ಚೌಟ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಕಂಬಳ ಸಮಿತಿಯ ಪ್ರದಾನ ಕಾರ್ಯ ದರ್ಶಿ ಸುಜಿತ್ ಪ್ರತಾಪ್,ಸಂಚಾಲಕ ಕಿಶೋರ್ ಕುಮಾರ್ ಪುತ್ತೂರು, ಸಲಹೆಗಾರರಾದ ಪ್ರೊ.ಗುಣಪಾಲ ಕಡಂಬ, ಪಿ.ಆರ್.ಶೆಟ್ಟಿ, ವಿಜಯ ಕುಮಾರ್ ಕಂಗಿನ ಮನೆ, ಉಪಾಧ್ಯಕ್ಷ ಸಂಜಯ ಪ್ರಭು ಮೊದಲಾದ ವರು ಉಪಸ್ಥಿತರಿದ್ದರು.

ಕಂಬಳದ ವಿಶೇಷ ಆಕರ್ಷಣೆ:-ನಿಖರ ತೀರ್ಪು ನೀಡಲು ಲೇಸರ್ ಬೀಮ್ ತಂತ್ರಜ್ಞಾನದ ಬಳಕೆ, ಎಲೆಕ್ಟ್ರಾನಿಕ್ ಟೈಮಿಂಗ್ಸ್ ವಿಶೇಷತೆ ಗಳನ್ನು ಬಳಸಲಾಗು ತ್ತದೆ. ಕಂಬಳದ ಓಟದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆಗೂ ಮುಂದಿನ ಹಂತದಲ್ಲಿ ಪ್ರೋತ್ಸಾಹ ನೀಡಲಾಗುವುದು. ವಿಶ್ವದ ವೇಗದ ಓಟಗಾರ ಹುಸೈನ್ ಬೋಲ್ಟ್ ಓಟಕ್ಕೂ ಕಂಬಳದ ಓಟಗಾರರ ಓಟವನ್ನು ಹೋಲಿಸುವುದು ಸಮಂಜಸ ಅಲ್ಲ ಕಂಬಳದ ಓಟಗಾರರ ಓಟ ಅದೇ ಕ್ಷೇತ್ರಕ್ಕೆ ಸಂಬಂಧಿಸಿ ದಂತೆ ಹಲವು ವಿಶೇಷತೆಗಳನ್ನು ಹೊಂದಿದೆ. ಕಂಬಳ ಪ್ರಾಣಿ ಹಿಂಸೆಯನ್ನು, ಜೂಜನ್ನು ಪ್ರೋತ್ಸಾಹಿಸುವುದಿಲ್ಲ ಎಂದು ಕಂಬಳ ಅಕಾಡೆಮಿಯ ಅಧ್ಯಕ್ಷ ಮತ್ತು ಕಂಬಳ ತಜ್ಞ ಗುಣಪಾಲ ಕಡಂಬ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News