ಮಂಗಳೂರಿನ ವಿವಿಧೆಡೆ ಮಟ್ಕಾ ದಂಧೆ: ಐವರ ಸೆರೆ

Update: 2021-03-05 11:54 GMT

ಮಂಗಳೂರು, ಮಾ.5: ನಗರದ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಮಟ್ಕಾ ದಂಧೆಗೆ ದಾಳಿ ನಡೆಸಿದ ಮಂಗಳೂರು ಸಿಸಿಬಿ ಪೊಲೀಸರು ಮಟ್ಕ ದಂಧೆಯಲ್ಲಿ ನಿರತರಾಗಿದ್ದ ಐದು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

ನಗರದ ಅತ್ತಾವರದ ನಂದನ್ ಎಸ್.ನಾಯ್ಕ್(35), ಮಣ್ಣಗುಡ್ಡೆಯ ಪ್ರಶಾಂತ್(47), ಉರ್ವ ಹೊಯಿಗೆಬೈಲ್‌ನ ಅನಿಲ್ ಕುಮಾರ್(44), ಕೋಡಿಯಾಲ್‌ಬೈಲ್‌ನ ದಿನಕರ ಆಳ್ವ (44), ಕಾವೂರಿನ ಅನಿಲ್ ಕುಮಾರ್(42) ಬಂಧಿತ ಆರೋಪಿಗಳು.

ಆರೋಪಿಗಳನ್ನು ಬಂಧಿಸಿದ ಪೊಲೀಸರು ಅವರಿಂದ 30,130 ರೂ. ಮತ್ತು 5 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ನಗ-ನಗದಿನ ಒಟ್ಟು ಮೌಲ್ಯ 66,130 ರೂ. ಆಗಿದೆ ಎಂದು ತಿಳಿಸಿದ್ದಾರೆ.

 ಪ್ರಕರಣದ ಪಾಂಡೇಶ್ವರ, ಬಂದರ್‌ಬರ್ಕೆ, ಕಾವೂರು ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News