ಇಸ್ಪೀಟು ಜುಗಾರಿ: ನಾಲ್ವರ ಬಂಧನ

Update: 2021-03-05 16:25 GMT

 ಮಲ್ಪೆ, ಮಾ.5: ಮಲ್ಪೆಬಂದರಿನ ಬಾಪುತೋಟ ದಕ್ಕೆಯ ಬಳಿ ಮಾ.4 ರಂದು ಸಂಜೆ ಇಸ್ಪೀಟು ಜುಗಾರಿ ಆಡುತ್ತಿದ್ದ ನಾಲ್ಕು ಮಂದಿಯನ್ನು ಮಲ್ಪೆ ಪೊಲೀಸರು ಬಂಧಿಸಿದ್ದಾರೆ.

ಕೊಪ್ಪಳ ಜಿಲ್ಲೆಯ ಅಶೋಕ(33), ಬಸಪ್ಪ(22), ನಾಗರಾಜ(26), ತೆಂಕನಿಡಿಯೂರು ಬೈಲಕೆರೆಯ ಸಂದೀಪ್ ಬಂಗೇರಾ(35) ಬಂಧಿತ ಆರೋಪಿಗಳು. ಇವರಿಂದ 2,300ರೂ. ನಗದು ವಶಪಡಿಸಿಕೊಳ್ಳಲಾಗಿದೆ.

ಈ ಬಗ್ಗೆ ಮಲ್ಪೆಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News