ಕೋಟೆಕಾರ್ : ಸ್ವಲಾತ್ ಮಜ್ಲಿಸ್ ವಾರ್ಷಿಕ ಸಮಾರಂಭ

Update: 2021-03-05 16:34 GMT

ಉಳ್ಳಾಲ :  ಧಾರ್ಮಿಕ ವಿಚಾರಗಳನ್ನು ಅಧ್ಯಯನ ನಡೆಸಿ ಧಾರ್ಮಿಕ ಆಚರಣೆಗಳು, ಆರಾಧನೆ, ಸ್ವಲಾತ್ ನನ್ನು ಮೈಗೂಡಿಸಿ ಕೊಳ್ಳಬೇಕೆಂದು  ಹುಸೈನ್ ಸ ಅದಿ ಕೆಸಿರೋಡ್  ಹೇಳಿದರು.

ಅವರು ಅಲ್ ಹಿದಾಯ ಜುಮಾ ಮಸ್ಜಿದ್ ಹಿದಾಯತ್ ನಗರ ಕೋಟೆಕಾರ್ ನಲ್ಲಿ ನಡೆದ ಸ್ವಲಾತ್ ಮಜ್ಲಿಸ್ ನ 21ನೇ ವಾರ್ಷಿಕ ಸಮಾರಂಭದ ನೇತೃತ್ವ ವಹಿಸಿ ಮಾತನಾಡಿದರು.

ಅಲ್ ಹಿದಾಯ ಜುಮಾ ಮಸೀದಿ ಅಧ್ಯಕ್ಷ ಮೊಯಿದೀನ್ ಕುಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.  ಈ ಸಂದರ್ಭದಲ್ಲಿ ಸಿ.ಟಿ.ಎಮ್ ಸಲಾಂ ತಂಙಲ್ ಕೆ.ಸಿ.ರೋಡ್ , ಮಸೀದಿ ಉಪಾಧ್ಯಕ್ಷ ಮಹಮ್ಮದ್ ಅಲಿ, ಕೋಶಾಧಿಕಾರಿ ಮುನೀರ್ ಎಸ್ ಎಚ್. ಎಸ್ ವೈ ಎಸ್. ಉಪಾಧ್ಯಕ್ಷ, ರಿಯಾಝ್. ಕೆ.ಎಮ್, ಅಬ್ದಲ್ ಖಾದರ್, ಕೋಶಾಧಿಕಾರಿ ಇಸ್ಮಾಯಿಲ್, ಕಾರ್ಯದರ್ಶಿ ಝಾಕಿರ್,  ಎಸ್ಸೆಸ್ಸೆಫ್ ಕಾರ್ಯದರ್ಶಿ ಹರ್ಷದ್. ಎಸ್ ವೈ ಎಸ್ ಇಸಾಬ ಕಾರ್ಯದರ್ಶಿ ಅಬ್ದಲ್ ಸಲಾಂ, ಬಶೀರ್ ಅಜ್ಜಿನಡ್ಕ ,  ಮುಸ್ತಫ ಝುಹ್ರಿ  ಕೊಮರಂಗಳ,  ಹಸನ್ ಮದನಿ, ಫಾರೂಕ್ ಕೋಟೆ ಪುರ  ಉಪಸ್ಥಿತರಿದ್ದರು. ಅಬ್ದುಲ್ ಅಝೀಝ್ ಸಖಾಫಿ ಸ್ವಾಗತಿಸಿದರು. ಕಾರ್ಯದರ್ಶಿ ಜಾಬಿರ್ ಹುಸೈನ್ ವಂದಿಸಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News