ಪ್ರಜ್ಞಾ ಠಾಕೂರ್ ಗೆ ಮತ್ತೆ ಕಾಡಿದ ಅನಾರೋಗ್ಯ, ಮುಂಬೈಗೆ ಏರ್ ಲಿಫ್ಟ್

Update: 2021-03-06 11:35 GMT

ಭೋಪಾಲ್:ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುವ ಭೋಪಾಲ್ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಅವರನ್ನು ಇಂದು ಚಿಕಿತ್ಸೆಗಾಗಿ ಮುಂಬೈಗೆ ಏರ್ ಲಿಫ್ಟ್ ಮಾಡಲಾಗಿದೆ.

ಪ್ರಜ್ಞಾ ಅವರನ್ನು ಮುಂಬೈನ ಕೋಕಿಲಾ ಬೆನ್ ಆಸ್ಪತ್ರೆಗೆ ದಾಖಲಿಸಲಾಗುವುದು ಎಂದು ಸಂಸದೆಯ ಕಚೇರಿ ಮಾಹಿತಿ ನೀಡಿದೆ.

ಒಂದು ತಿಂಗಳೊಳಗೆ ಎರಡನೇ ಬಾರಿ ಪ್ರಜ್ಞಾ ಠಾಕೂರ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಫೆಬ್ರವರಿ 19ರಂದು ಇದೇ ರೀತಿಯ ಸಮಸ್ಯೆಗೆ ಹೊಸದಿಲ್ಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ(ಏಮ್ಸ್)ಗೆ ದಾಖಲಿಸಲಾಗಿತ್ತು.

ಕೋವಿಡ್-19 ಸೋಂಕಿನ ಲಕ್ಷಣ ಕಾಣಿಸಿಕೊಂಡ ಕಾರಣ 2020ರ  ಡಿಸೆಂಬರ್  ನಲ್ಲಿ ಏಮ್ಸ್ ಗೆ ದಾಖಲಿಸಲಾಗಿತ್ತು.

10 ಮಂದಿ ಮೃತಪಟ್ಟು, ಹಲವು ಜನರು ಗಾಯಗೊಂಡಿದ್ದ 2008ರ ಮಾಲೆಗಾಂವ್ ಬಾಂಬ್ ಸ್ಫೋಟದ ಆರೋಪಿಯಾಗಿರುವ ಠಾಕೂರ್ ಗೆ 2017ರಲ್ಲಿ ರಾಷ್ಟ್ರೀಯ ತನಿಖಾ ಘಟಕ ಆರೋಗ್ಯದ ನೆಲೆಯಲ್ಲಿ ಜಾಮೀನು ಮಂಜೂರು ಮಾಡಿತ್ತು ಪ್ರಜ್ಞಾ ಠಾಕೂರ್ 2019ರ ಲೋಕಸಭಾ ಚುನಾವಣೆಯಲ್ಲಿ ಭೋಪಾಲ್ ನಿಂದ ಬಿಜೆಪಿ ಟಿಕೆಟ್ ನಿಂದ ಸ್ಪರ್ಧಿಸಿ ಕಾಂಗ್ರೆಸ್ ನ ನಾಯಕ ದಿಗ್ವಿಜಯ ಸಿಂಗ್ ವಿರುದ್ಧ 3.6 ಲಕ್ಷ ಮತಗಳಿಂದ ಜಯಶಾಲಿಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News