ಮಾ. 7ರಂದು 'ತಫ್ಸೀರ್ ಇಬ್ನು ಕಸೀರ್' ಕನ್ನಡ ಭಾಷಾಂತರ ಬಿಡುಗಡೆ
Update: 2021-03-06 13:31 GMT
ಮಂಗಳೂರು : ಶೈಖ್ ಸಫಿಯುರಹ್ಮಾನ್ ಮುಬಾರಕ್ ಪುರಿ ಅವರ 'ಅಲ್ ಮಿಸ್ಬಾಹುಲ್ ಮುನೀರ್ ಫೀ ತಹ್ʼಝೀಬಿ ತಫ್ಸೀರ್ ಇಬ್ನು ಕಸೀರ್' ಎಂಬ ಪವಿತ್ರ ಕುರ್ʼಆನ್ ವ್ಯಾಖ್ಯಾನ ಗ್ರಂಥದ ಕನ್ನಡ ಅರ್ಥಾನುವಾದ ಗ್ರಂಥವು ರವಿವಾರ ಸಂಜೆ 5 ಗಂಟೆಗೆ ದೇರಳಕಟ್ಟೆ ಜಂಕ್ಷನ್ ನಲ್ಲಿ ಬಿಡುಗಡೆಗೊಳ್ಳಲಿದೆ.
ಕರ್ನಾಟಕ ಸಲಫಿ ಎಸೋಸಿಯೇಷನ್ ಮಂಗಳೂರು ಇದರ ವತಿಯಿಂದ ನಡೆಯುವ ಕಾರ್ಯಕ್ರಮದಲ್ಲಿ ಖ್ಯಾತ ವಿದ್ವಾಂಸರಾದ ಶೈಖ್ ಫೈಝುಲ್ಲಾಹ್ ಮದನಿ ಅವರು ಅನುವಾದ ಗ್ರಂಥವನ್ನು ಬಿಡುಗಡೆಗೊಳಿಸಿ ಉಪನ್ಯಾಸ ನೀಡುವರು.
ಮೌಲವಿ ಮುಜಾಹಿದ್ ಬಾಲುಶ್ಶೇರಿ, ಮೌಲವಿ ಶಿಹಾಬ್ ಎಡಕ್ಕರ ಮತ್ತು ಮೌಲವಿ ಇಜಾಝ್ ಸ್ವಲಾಹಿ ಉಪನ್ಯಾಸ ನೀಡುವರು ಎಂದು ಕೆಎಸ್ಎ ಮಂಗಳೂರು ಅಧ್ಯಕ್ಷರಾದ ಅಬ್ದುರಶೀದ್ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.