ಮಾ.7ರಂದು ಬ್ರಹ್ಮಾವರದಲ್ಲಿ ಸತ್ಯನಾಥ ಸ್ಟೋರ್ಸ್‌ ಶುಭಾರಂಭ

Update: 2021-03-06 16:00 GMT

ಬ್ರಹ್ಮಾವರ, ಮಾ.6: ಕಳೆದ ಏಳು ದಶಕಗಳಿಂದ ವಸ್ತ್ರ ವ್ಯಪಾರ ಮೂಲಕ ಕರಾವಳಿ, ಮಲೆನಾಡು ಭಾಗದ ಗ್ರಾಹಕರ ಪ್ರೀತಿಗೆ ಪಾತ್ರವಾದ ಸತ್ಯನಾಥ ಸ್ಟೋರ್ಸ್‌ ಬೃಹತ್ ವಸ್ತ್ರಮಳಿಗೆ ಬ್ರಹ್ಮಾವರ ಮಾರಿಗುಡಿ ರಸ್ತೆ ಹಳೆ ಪೊಲೀಸ್ ಸ್ಟೇಶನ್ ಮುಂಭಾಗ ವಿಶಾಲವಾದ ಪುರುಷೋತ್ತಮ ಮಂದಿರ ನೂತನ ಕಟ್ಟಡದಲ್ಲಿ ಮಾ.7ರಂದು ಬೆಳಗ್ಗೆ 9ಗಂಟೆಗೆ ಶುಭಾರಂಭಗೊಳ್ಳಲಿದೆ.

ಸಾಬರಕಟ್ಟೆ ಗರಿಕೆಮಠ ಶ್ರೀಅರ್ಕ ಮಹಾಗಣಪತಿ ದೇವಸ್ಥಾನದ ವೇದ ಮೂರ್ತಿ ಜಿ.ರಾಮಪ್ರಸಾದ ಅಡಿಗ ಮಳಿಗೆಯನ್ನು ಉದ್ಘಾಟಿಸಲಿ ರುವರು. ಸಂಜೆ 6 ಗಂಟೆಗೆ ಝೀ ಟಿವಿ ಖ್ಯಾತಿ ಸರಿಗಮಪ ಸುಪ್ರಸಿದ್ಧ ಗಾಯಕರಿಂದ ಸತ್ಯನಾಥ ಗಾನವೈಭವ ಸಂಗೀತ ಕಾರ್ಯಕ್ರಮ ಜರಗಲಿದೆ.

ಇಪ್ಪತ್ತಕ್ಕೂ ಅಧಿಕ ರಾಜ್ಯಗಳ ವೈವಿಧ್ಯಮಯ ಜವಳಿ ಅಪಾರ ಸಂಗ್ರಹದ ಪರಿಪೂರ್ಣ ಮದುವೆ ಜವಳಿ ಮಳಿಗೆ ಇದಾಗಿದೆ. ಸಂಸ್ಥೆಯು ತೀರ್ಥಹಳ್ಳಿ, ಕೊಪ್ಪದಲ್ಲಿ ಶಾಖೆಯನ್ನು ಹೊಂದಿದ್ದು, ಪರಿಪೂರ್ಣ ಮದುವೆ ಜವಳಿ ಸಹಿತ ಬನಾರಸ್, ಧರ್ಮಾವರಂ, ಕಾಟನ್ ಸಾರಿ, ಕಾಟನ್ ಸಿಲ್ಕ್, ಕೋಲ್ಕತ್ತಾ ಕಾಟನ್, ಕಾಂಜೀವರಂ,ಬಾಂಗ್ಲಾ ಕಾಟನ್, ಫ್ಯಾನ್ಸಿ ಡಿಸೈನರ್ ಸಾರೀಸ್, ಬ್ರೈಡಲ್ ಲೆಹಂಗಾ, ಲಾಂಗ್‌ಟಾಪ್, ಚೂಡಿದಾರ, ಕುರ್ತೀಸ್, ಮಕ್ಕಳ ಉಡುಪುಗಳು, ಮೆನ್ಸ್‌ವೇರ್, ಹ್ಯಾಂಡ್‌ಲೂಮ್ಸ್, ಬ್ರ್ಯಾಂಡೆಡ್ ಡಿಸೈನ್ ಸಾರಿ ಸಹಿತ ವಿವಿಧ ಕಂಪನಿಗಳ ಬಟ್ಟೆಗಳು ಅಪಾರ ಶ್ರೇಣಿ, ನವನವೀನ ವಿನ್ಯಾಸದೊಂದಿಗೆ ಅತ್ಯಾಕರ್ಷಕ ದರದಲ್ಲಿ ಲಭ್ಯವಿದೆ.

ಬ್ರಹ್ಮಾವರದ ಈ ನೂತನ ಮಳಿಗೆ ವ್ಯವಸ್ಥಿತ ಮತ್ತು ವಿಶಾಲವಾಗಿ ನಿರ್ಮಿಸಲಾಗಿದೆ. 30,000 ಚದರಡಿ ವಿಸ್ತೀರ್ಣದಲ್ಲಿ ನಾಲ್ಕು ಅಂತಸ್ತುಗಳ ಹವಾ ನಿಯಂತ್ರಿತ ವ್ಯವಸ್ಥೆಯನ್ನು ಹೊಂದಿದೆ. 300ಕ್ಕೂ ಅಧಿಕ ಎಲ್ಲಾ ರೀತಿಯ ವಾಹನ ನಿಲುಗಡೆಗೆ ವ್ಯವಸ್ಥೆ ಜತೆಗೆ ಗ್ರಾಹಕರಿಗೆ ಉಚಿತ ವೈಫೈ ಸೌಲಭ್ಯವನ್ನು ಹೊಂದಿದೆ. ಗ್ರಾಹಕರ ಅನುಕೂಲಕ್ಕಾಗಿ ಫುಡ್‌ಕೋರ್ಟ್ ವ್ಯವಸ್ಥೆಯನ್ನು ರೂಪಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News