ಸರಕಾರಿ ಅಧಿಕಾರಿಗಳಿಗೆ ಕೋಲಿನಿಂದ ಥಳಿಸಿ: ಜನರಿಗೆ ಕರೆ ನೀಡಿದ ಕೇಂದ್ರ ಸಚಿವ ಗಿರಿರಾಜ್ ಸಿಂಗ್

Update: 2021-03-07 17:41 GMT

ಪಾಟ್ನಾ,ಮಾ.7: ಜನರ ಕುಂದುಕೊರತೆಗಳನ್ನು ಆಲಿಸದ ಅಧಿಕಾರಿಗಳನ್ನು ಬಿದಿರು ಕೋಲುಗಳಿಂದ ಥಳಿಸುವಂತೆ ಕೇಂದ್ರ ಸಚಿವ ಗಿರಿರಾಜ ಸಿಂಗ್ ಅವರು ತನ್ನ ಕ್ಷೇತ್ರದ ಮತದಾರರಿಗೆ ವಿಪರೀತದ ಸಲಹೆಯೊಂದನ್ನು ನೀಡಿದ್ದಾರೆ.

ತನ್ನ ಲೋಕಸಭಾ ಕ್ಷೇತ್ರ ಬಿಹಾರದ ಬೇಗುಸರಾಯ್ ಜಿಲ್ಲೆಯ ಖೋದಾವಂದಪುರದಲ್ಲಿ ಕೃಷಿ ಸಂಸ್ಥೆಯೊಂದು ಏರ್ಪಡಿಸಿದ್ದ ಸಮಾರಂಭದಲ್ಲಿ ಮಾತನಾಡುತ್ತಿದ್ದ ಸಿಂಗ್,‘ಅಧಿಕಾರಿಗಳ ಕರ್ತವ್ಯಲೋಪದ ಬಗ್ಗೆ ಕೇತ್ರದ ಮತದಾರರು ನನ್ನ ಬಳಿ ಆಗಾಗ್ಗೆ ದೂರುತ್ತಲೇ ಇರುತ್ತಾರೆ. ಇಂತಹ ಸಣ್ಣಪುಟ್ಟ ವಿಷಯಕ್ಕೆಲ್ಲ ನನ್ನ ಬಳಿ ಏಕೆ ಬರುತ್ತೀರಿ? ಸಂಸದರು, ಶಾಸಕರು, ಗ್ರಾಮ ಮುಖ್ಯಸ್ಥರು, ಜಿಲ್ಲಾಧಿಕಾರಿಗಳು, ಉಪ ವಿಭಾಗಾಧಿಕಾರಿಗಳು, ಬಿಡಿಒಗಳು ಮುಂತಾದವರು ಜನರಿಗೆ ಸೇವೆ ಸಲ್ಲಿಸಲು ಬದ್ಧರಾಗಿದ್ದಾರೆ. ನಿಮ್ಮ ಕುಂದುಕೊರತೆಗಳನ್ನು ಅವರು ಆಲಿಸದಿದ್ದರೆ ಎರಡೂ ಕೈಗಳಲ್ಲಿ ಬಿದಿರು ಕೋಲನ್ನು ಹಿಡಿದುಕೊಂಡು ಅವರ ತಲೆಗೆ ಬಲವಾಗಿ ಬಾರಿಸಿ. ಅದೂ ಕೆಲಸ ಮಾಡದಿದ್ದರೆ ನಾನು ನಿಮ್ಮ ಬೆಂಬಲಕ್ಕಿದ್ದೇನೆ’ ಎಂದು ಜನರನ್ನುದ್ದೇಶಿಸಿ ಹೇಳಿದರು. ಸಚಿವರ ಈ ಮಾತುಗಳಿಗೆ ವೇದಿಕೆಯಲ್ಲಿದ್ದ ಗಣ್ಯರು ಕುಳಿತಲ್ಲಿಯೇ ಮುಲುಗಿದರೆ ಜನರು ಮಾತ್ರ ಭರ್ತಿ ಜೈಕಾರಗಳನ್ನು ಕೂಗಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News