ನಿಮ್ಮ ಪ್ರಕಾರ ಕಾಶ್ಮೀರ ಈಗ ಸ್ವರ್ಗವಾಗಿದೆ ಎಂದಾದರೆ, ಬಂಗಾಳ ಕಾಶ್ಮೀರವಾಗುವುದರಲ್ಲಿ ತಪ್ಪೇನಿದೆ?

Update: 2021-03-07 08:06 GMT

ಕೋಲ್ಕತಾ: ತೃಣಮೂಲ ಕಾಂಗ್ರೆಸ್ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತಂದರೆ ಅದು ಪಶ್ಚಿಮಬಂಗಾಳವನ್ನು ಮತ್ತೊಂದು ಕಾಶ್ಮೀರವನ್ನಾಗಿ ಪರಿವರ್ತಿಸುತ್ತದೆ ಎಂದು ಬಿಜೆಪಿ ನಾಯಕ ಸುವೇಂದು ಅಧಿಕಾರಿ ಚುನಾವಣಾ ರ್ಯಾಲಿಯಲ್ಲಿ ನೀಡಿದ್ದ ಹೇಳಿಕೆಗೆ ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಅಧಿಕಾರಿ ಹೇಳಿಕೆಗೆ ಟ್ವಿಟರ್ ನಲ್ಲಿ ಪ್ರತಿಕ್ರಿಯಿಸಿರುವ  ಒಮರ್ ಅಬ್ದುಲ್ಲಾ, ಆದರೆ ನಿಮ್ಮ, ಬಿಜೆಪಿಯವರ ಪ್ರಕಾರ, ಆಗಸ್ಟ್ 2019ರ ಬಳಿಕ ಕಾಶ್ಮೀರವು ಸ್ವರ್ಗವಾಗಿದೆ. ಆದ್ದರಿಂದ ಪಶ್ಚಿಮಬಂಗಾಳವು ಕಾಶ್ಮೀರವಾಗುವುದರಲ್ಲಿ ತಪ್ಪೇನಿದೆ? ಎಂದು ಪ್ರಶ್ನಿಸಿದರು.

ಹೇಗಾದರೂ ಬಂಗಾಳಿಗಳು ಕಾಶ್ಮೀರವನ್ನು ಪ್ರೀತಿಸುತ್ತಾರೆ. ಸಾಕಷ್ಟು ಸಂಖ್ಯೆಯಲ್ಲಿ ಕಾಶ್ಮೀರಕ್ಕೆ ಭೇಟಿ ನೀಡುತ್ತಾರೆ. ಹೀಗಾಗಿ ನಿಮ್ಮ ಅವಿವೇಕಿ, ಅಭಿರುಚಿ ಇಲ್ಲದ ಪ್ರತಿಕ್ರಿಯೆಯನ್ನು ನಾವು ಕ್ಷಮಿಸುತ್ತೇವೆ ಎಂದು ಟ್ವೀಟಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News