ಮಾ. 8ರಂದು ದ.ಕ. ಜಿಲ್ಲಾ ಯಮಾನಿ ಸಂಗಮ
Update: 2021-03-07 16:05 GMT
ಬಂಟ್ವಾಳ : ಯಮಾನೀಸ್ ಅಸೋಸಿಯೇಷನ್ ಕೇಂದ್ರ ಸಮಿತಿಯ ನಿರ್ದೇಶನದಂತೆ ಜಿಲ್ಲಾ ಯಮಾನಿ ಸಂಗಮ ಮಾ. 8ರಂದು ಬಿ.ಸಿ.ರೋಡ್ ರಿಕ್ಷಾ ಭವನದಲ್ಲಿ ಬೆಳಗ್ಗೆ 10:30ಕ್ಕೆ ಜಿಲ್ಲಾ ಯಮಾನೀಸ್ ಅಧ್ಯಕ್ಷ ಅಬ್ದುಲ್ ರಶೀದ್ ಯಮಾನಿ ಕಡಬ ಅಧ್ಯಕ್ಷತೆಯಲ್ಲಿ ನಡೆಯಲಿದೆ.
ಇರ್ಷಾದ್ ದಾರಿಮಿ ಮಿತ್ತಬೈಲ್ ದುವಾಗೈಯಲ್ಲಿದ್ದು ಸಭೆಯನ್ನು ಕೇಂದ್ರ ಯಮಾನೀಸ್ ಅಧ್ಯಕ್ಷರಾದ ಸಯ್ಯದ್ ಸನಾವುಲ್ಲಾ ತಂಙಳ್ ಬಾಅಲವಿ ಅಲ್ ಯಮಾನಿ ಉದ್ಘಾಟಿಸಲಿದ್ದಾರೆ.
ಯಮಾನೀಸ್ ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಅಲಿ ಯಮಾನಿ ವಯನಾಡ್ ಅಬೂಬಕರ್ ಯಮಾನಿ ಕಣ್ಣೂರು ವಿಷಯ ಮಂಡಿಸಲ್ಲಿದ್ದಾರೆಂದು ಯಮಾನೀಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಬ್ದುಸ್ಸಲಾಂ ಯಮಾನಿ ತುಂಬೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.