ಮಂಗಳೂರಲ್ಲಿ ಪೊಲೀಸ್ ಕಾರ್ಯಾಚರಣೆ: 70 ಮಂದಿ ವಶಕ್ಕೆ

Update: 2021-03-07 16:13 GMT

ಮಂಗಳೂರು, ಮಾ.7: ಶನಿವಾರ ರಾತ್ರಿ ವೇಳೆ ನಗರದ ವಿವಿಧೆಡೆ ಅನಗತ್ಯ ಕುಳಿತು ಅನಪೇಕ್ಷಿತವಾಗಿ ವರ್ತಿಸುತ್ತಿದ್ದ 70 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದು ಪುರಭವನದಲ್ಲಿ ಕುಳ್ಳಿರಿಸಿ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.

ರಾತ್ರಿ 8ರಿಂದ 10 ಗಂಟೆಯವರೆಗೆ ಬಂದರು, ಬರ್ಕೆ, ಉರ್ವ ಮತ್ತು ಕದ್ರಿ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಲಾಯಿತು. ಕತ್ತಲಿನ ಪ್ರದೇಶದಲ್ಲಿ ಕುಳಿತುಕೊಂಡಿದ್ದವರು, ಕಾರಿನಲ್ಲಿ ಕುಳಿತು ಮದ್ಯಪಾನ ಮಾಡುತ್ತಿದ್ದವರು, ಸಿಗರೇಟ್ ಸೇದುತ್ತಿದ್ದವರು, ಮಹಿಳೆಯರಿಗೆ ಆತಂಕ ಮೂಡಿಸುವ ರೀತಿಯಲ್ಲಿ ವರ್ತಿಸುತ್ತಿದ್ದವರು ಸೇರಿದಂತೆ ಅನಪೇಕ್ಷಿತ ರೀತಿಯಲ್ಲಿ ವರ್ತಿಸುತ್ತಿದ್ದವರನ್ನು ವಶಕ್ಕೆ ಪಡೆದುಕೊಳ್ಳಲಾಯಿತು.

ಮಂಗಳೂರು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಮತ್ತು ಎಸಿಪಿ ರಂಜಿತ್ ಬಂಡಾರು ಎಚ್ಚರಿಕೆ ನೀಡಿ ಕಳುಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News