ಜೂಜಾಟ : 11 ಮಂದಿ ಆರೋಪಿಗಳು ಸೆರೆ

Update: 2021-03-08 07:02 GMT

ಮಂಗಳೂರು : ನಗರದ ಪಂಪ್ ವೆಲ್ ಬಳಿ ಅಕ್ರಮ ಜೂಜಾಟವಾದ ಅಂದರ್- ಬಾಹರ್ ಆಟವಾಡುತ್ತಿದ್ದ ಸ್ಥಳಕ್ಕೆ ಮಂಗಳೂರು ಸಿಸಿಬಿ ಪೊಲೀಸರು ದಾಳಿ ನಡೆಸಿ  11 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತರನ್ನು ಕುಡುಪು ನಿವಾಸಿ ಅಕ್ಷಯ್, ತಾರೆತೋಟದ ಶಶಿಕುಮಾರ್, ಕೆಸಿನಗರದ ಅಸೀಫ್, ಕಲ್ಲಾಪು ನಿವಾಸಿ ಅಶೋಕ್ ಡಿ ಸೋಜಾ, ವೆಲೆನ್ಸಿಯಾದ ಕಾಶಿನಾಥ್, ಕಂಕನಾಡಿಯ ವಿ ಬಶೀರ್, ಅಶೋಕ ನಗರದ ಗುರುಪ್ರಸಾದ್, ಶಕ್ತಿನಗರದ ಸುರೇಶ್, ಜೆಪ್ಪಿನಮೊಗರು ನಿವಾಸಿ  ರಾಜಶೇಖರ, ಅನಿಲ್ ಕುಮಾರ್, ಸುಧಾಕರ ಸನಿಲ್ ಎಂಬವರನ್ನು ವಶಕ್ಕೆ ಪಡೆದುಕೊಂಡು ಅವರ ವಶದಿಂದ ರೂ. 38,000/- ನಗದು, 11 ಮೊಬೈಲ್ ಫೋನುಗಳು ಹಾಗು ಇತರ ಸೊತ್ತುಗಳನ್ನು ವಶಕ್ಕೆ ಪಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. 

ಈ ಬಗ್ಗೆ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News