ಗಾಂಜಾ ಮಾರಾಟ: ಇಬ್ಬರ ಬಂಧನ

Update: 2021-03-08 16:29 GMT

ಉಡುಪಿ, ಮಾ.8: 80 ಬಡಗಬೆಟ್ಟು ಗ್ರಾಮದ ಶಾಂತಿನಗರದ ವಸುಧಾ ಕಂಫರ್ಟ್ ಬಳಿ ಮಾ.8ರಂದು ಬೆಳಗ್ಗೆ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರನ್ನು ಉಡುಪಿ ಸೆನ್ ಪೊಲೀಸರು ಬಂಧಿಸಿದ್ದಾರೆ.

ಒರಿಸ್ಸಾ ಮೂಲದ 80 ಬಡಗಬೆಟ್ಟು ರಾಜೀವನಗರ ನಿವಾಸಿ, ಪೂರ್ಣ ಚಂದ್ರದಾಸ್(23) ಮತ್ತು ಮಣಿಪಾಲ ಲೇಕ್ ವೀವ್ ಬಳಿಯ ನಿವಾಸಿ ಕಮಲು(28) ಬಂಧಿತ ಆರೋಪಿಗಳು. ಇವರಿಂದ 2 ಕಿಲೋ 20ಗ್ರಾಂ ತೂಕದ ಗಾಂಜಾವನ್ನು ಮತ್ತು ಗಿರಾಕಿ ಕುದುರಿಸಲು ಬಳಸಿದ್ದ 2 ಮೊಬೈಲ್ ಪೋನ್, ಬ್ಯಾಗ್ ಮತ್ತು 18 ಪ್ಲಾಸ್ಟಿಕ್ ತೊಟ್ಟೆಯನ್ನು ವಶಪಡಿಸಿಕೊಂಡಿದ್ದಾರೆ. ಇವುಗಳ ಒಟ್ಟು ಮೌಲ್ಯ 79,000ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News