ರಾಣಿ ಚೆನ್ನಮ್ಮ ರಾಜ್ಯ ಪ್ರಶಸ್ತಿಗೆ ಸುರತ್ಕಲ್ ದೀಕ್ಷಾ ಶೆಟ್ಟಿ ಆಯ್ಕೆ
Update: 2021-03-08 17:20 GMT
ಮಂಗಳೂರು, ಮಾ.8: ರಾಜ್ಯ ಸರಕಾರದ 2020-21ನೇ ಸಾಲಿನ ಪ್ರತಿಷ್ಠಿತ ಕಿತ್ತೂರು ರಾಣಿ ಚೆನ್ನಮ್ಮ ರಾಜ್ಯ ಪ್ರಶಸ್ತಿಗೆ ಸುರತ್ಕಲ್ ಕಾಟಿಪಳ್ಳದ ಬಹುಮುಖ ಪ್ರತಿಭೆ ದೀಕ್ಷಾ ಎಂ. ಶೆಟ್ಟಿ ಆಯ್ಕೆಯಾಗಿದ್ದಾರೆ.
ಮಾ.10ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ವಿಶ್ವ ಮಹಿಳಾ ದಿನಾಚರಣೆಯ ಸರಕಾರಿ ಕಾರ್ಯಕ್ರಮದಲ್ಲಿ ಅವರು ಪ್ರಶಸ್ತಿ ಸ್ವೀಕರಿಸಲಿದ್ದಾರೆ. ಅವರು ಮಾಧವ ಎಸ್. ಶೆಟ್ಟಿ ಬಾಳ, ಯಕ್ಷವೈಭವ ಕಾಟಿಪಳ್ಳ ಹಾಗೂ ಮೀರಾವಾಣಿ ಎಂ. ಶೆಟ್ಟಿ ಜಪ್ಪುಗುಡ್ಡೆ ಗುತ್ತು ದಂಪತಿಯ ಪುತ್ರಿ.