ತುಳು ಭಾವಗೀತೆ ಸ್ಪರ್ಧೆ
ಉಡುಪಿ, ಮಾ.11: ಉಡುಪಿ ತುಳುಕೂಟ ವತಿಯಿಂದ ತುಳುಕವಿ ದಿ. ನಿಟ್ಟೂರು ಸಂಜೀವ ಭಂಡಾರಿ ಸ್ಮರಣಾರ್ಥ ತುಳು ಭಾವಗೀತೆ ಸ್ಪರ್ಧೆ ಮಾ.14ರಂದು ಬೆಳಗ್ಗೆ 9ಗಂಟೆಗೆ ಉಡುಪಿ ಎಂಜಿಎಂ ಕಾಲೇಜಿನ ಗೀತಾಂಜಲಿ ಸಭಾಂಗಣದಲ್ಲಿ ನಡೆಯಲಿದೆ.
6 ವರ್ಷದಿಂದ 14 ವರ್ಷದವರೆಗಿನವರಿಗೆ ಜೂನಿಯರ್ ವಿಭಾಗ, 15 ವರ್ಷ ಮೇಲ್ಪಟ್ಟು ಎಲ್ಲಾ ವಯೋಮಾನದವರಿಗೆ ಸೀನಿಯರ್ ವಿಭಾಗದಲ್ಲಿ ಸ್ಫರ್ಧೆ ನಡೆಯಲಿದೆ. ಉಡುಪಿ, ದಕ್ಷಿಣ ಕನ್ನಡ, ಕಾಸರಗೋಡು ಜಿಲ್ಲೆಯವರು ಸ್ಫರ್ಧೆಯಲ್ಲಿ ಭಾಗವಹಿಸ ಬಹುದು. ಯಾವುದೇ ಸಂಗೀತ ವಾದ್ಯಪರಿಕರಗಳನ್ನು ಬಳಸದೆ 3ನಿಮಿಷದ ತುಳುಭಾವಗೀತೆ ಹಾಡಬೇಕು.
ಹಿರಿಯ, ಕಿರಿಯ ತುಳು ಸಾಹಿತಿಗಳ ರಚನೆ ಮತ್ತು ಸ್ವರಚಿತ ತುಳುಭಾವಗೀತೆಗಳಿಗೆ ಆದ್ಯತೆ. ಪ್ರತೀ ವಿಭಾಗದಲ್ಲಿ ಪ್ರಥಮ 2000ರೂ. ನಗದು, ಪ್ರಶಸ್ತಿ ಫಲಕ, ದ್ವಿತೀಯ 1500ರೂ. ನಗದು, ಪ್ರಶಸ್ತಿಫಲಕ, ತೃತೀಯ 1000 ರೂ. ನಗದು, ಪ್ರಶಸ್ತಿ ಫಲಕ ನೀಡಲಾಗುವುದು ಎಂದು ತುಳುಕೂಟದ ಅಧ್ಯಕ್ಷ ಬಿ.ಜಯಕರ ಶೆಟ್ಟಿ ಇಂದ್ರಾಳಿ, ಕಾರ್ಯಕ್ರಮ ಸಂಚಾಲಕ ಪ್ರಕಾಶ ಸುವರ್ಣ ಕಟಪಾಡಿ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ