ಪ್ರತ್ಯೇಕ ಜುಗಾರಿ ಪ್ರಕರಣ: 14 ಮಂದಿ ಬಂಧನ

Update: 2021-03-15 17:11 GMT

ಹಿರಿಯಡ್ಕ, ಮಾ.15: ಪೆರ್ಡೂರು ಗ್ರಾಮದ ಕುಬೇರಾ ಬಾರ್‌ನ ಎದುರು ಹೆರ್ಡೆ ಕಾಡಿನಲ್ಲಿ ಮಾ.14ರಂದು ಇಸ್ಪೀಟ್ ಜುಗಾರಿ ಆಡುತ್ತಿದ್ದ ಸುಕಲ (36), ಮಂಜುನಾಥ ಕುಲಾಲ್(38), ಅಪ್ಪು(39), ರಾಜು ಶೆಟ್ಟಿ(64), ರಾಘವೇಂದ್ರ(38), ಶೇಖರ್(42), ರಾಜು(45), ರಾಜು ಮೆಹ್ರ(34) ಎಂಬವರನ್ನು ಪೊಲೀಸರು ಬಂಧಿಸಿ, 4710ರೂ. ನಗದು ಹಾಗೂ 1,50,000 ರೂ. ಮೌಲ್ಯದ ಐದು ಬೈಕ್‌ಗಳು, 6800ರೂ. ವೌಲ್ಯದ ವಶ ಪಡಿಸಿಕೊಂಡಿ ದ್ದಾರೆ. ಈ ಬಗ್ಗೆ ಹಿರಿಯಡ್ಕ ಪೊಲೀ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕುಂದಾಪುರ: ಹೆಸ್ಕತ್ತೂರು ಗ್ರಾಮದ ಕಮಲ ಕಿಶೋರ ಕ್ರಶ್ಯರ್ ಬಳಿಯ ಹಾಡಿಯಲ್ಲಿ ಮಾ.14ರಂದು ಇಸ್ಪೀಟ್ ಜುಗಾರಿ ಆಡುತ್ತಿದ್ದ ದರ್ಶನ್(26), ಅರುಣ್(32), ಪುಷ್ಪರಾಜ್(39), ಸಂತೋಷ(32), ಗಣೇಶ(31), ಮಂಜು(31) ಎಂಬವರನ್ನು ಬಂಧಿಸಿ ಪೊಲೀಸರು, 4,850ರೂ. ವಶಪಡಿಸಿ ಕೊಂಡಿದ್ದಾರೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News