×
Ad

ಹೊಳೆಯಲ್ಲಿ ಮೃತದೇಹ ಪತ್ತೆ

Update: 2021-03-17 21:21 IST

ಬ್ರಹ್ಮಾವರ, ಮಾ.17: ಕಚ್ಚೂರು ಗ್ರಾಮದ ಹಾಲೆಕೋಡಿ ಎಂಬಲ್ಲಿ ಹೊಯಿಗೆ ಧಕ್ಕೆಯ ಸಮೀಪ ಸೀತಾನದಿಯ ದಡದಲ್ಲಿ ಸುಮಾರು 45 ರಿಂದ 50ವರ್ಷ ಪ್ರಾಯದ ಅಪರಿಚಿತ ಗಂಡಸಿನ ಮೃತದೇಹ ಮಾ.17ರಂದು ಬೆಳಗ್ಗೆ ಪತ್ತೆಯಾಗಿದೆ.

ಮೃತದೇಹವು ಕೊಳೆತು ಹೋಗಿದ್ದು, ವ್ಯಕ್ತಿಯು ಸುಮಾರು 2-3 ದಿನಗಳ ಹಿಂದೆ ಹೊಳೆಯ ಬದಿಯಲ್ಲಿ ಆಕಸ್ಮಿಕವಾಗಿ ನೀರಿಗೆ ಬಿದ್ದು ಅಥವಾ ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದ ಹೊಳೆಯ ನೀರಿಗೆ ಹಾರಿ ಮೃತಪಟ್ಟಿರ ಬಹುದು ಎಂದು ಶಂಕಿಸಲಾಗಿದೆ.

ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News