×
Ad

ಕಿನ್ಯ ಕೂಟು ‌ಝಿಯಾರತ್ ಸಮಾರೋಪ

Update: 2021-03-19 21:35 IST

ಉಳ್ಳಾಲ: ಮಕ್ಕಳಿಗೆ ಶಿಕ್ಷಣ ನೀಡುವ ಜೊತೆಗೆ ಅವರನ್ನು ಅನಗತ್ಯ ಕಾರ್ಯ ಚಟುವಟಿಕೆ ಗಳಲ್ಲಿ ಭಾಗಿಯಾಗದಂತೆ ರಕ್ಷಿಸುವ ಕಾರ್ಯ ಪೋಷಕರದ್ದಾಗಿದೆ ಎಂದು ಸಯ್ಯಿದ್ ಬಾತಿಷ್ ತಂಙಳ್ ಹೇಳಿದರು.

ಅವರು ಕಿನ್ಯದಲ್ಲಿ ಹಝ್ರತ್ ಹುಸೈನ್ ವಲಿಯುಲ್ಲಾಹಿ ದರ್ಗಾ ಶರೀಫ್ ಕಿನ್ಯ ಇದರ ಆಶ್ರಯದಲ್ಲಿ ನಡೆಯುವ ಕೂಟು ‌ಝಿಯಾರತ್ ನ ಸಮಾ ರೋಪ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕೇಂದ್ರ ಜುಮ್ಮಾ ಮಸೀದಿ ಮುದರ್ರಿಸ್ ಪತ್ತಾಹ್ ಫೈಝಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಯ್ಯಿದ್ ಶಿಹಾಬುದ್ದೀನ್ ತಂಙಳ್ ಅಲ್ ಉಮೈದಿ ದುವಾ ನೆರವೇರಿಸಿದರು. ಸಯ್ಯಿದ್ ಸಾಬಿಕ್ ಅಲಿ ಶಿಹಾಬ್ ತಂಙಳ್ ಪಾಣಕ್ಕಾಡ್ ಕೂಟು ‌ಝಿಯಾರತ್ ನೇತೃತ್ವ ವಹಿಸಿದ್ದರು.

ಕಾರ್ಯಕ್ರಮ ದಲ್ಲಿ ನೌಫಲ್ ಫೈಝಿ ಕೊಡುವಳ್ಳಿ,ಕುತುಬಿಯ್ಯನಗರ ಮಸೀದಿ ಖತೀಬ್ ಮುಸ್ತಫಾ ಸ ಅದಿ,ಉಕ್ಕುಡ ಮಸೀದಿ ಖತೀಬ್ ಅಬ್ದುಲ್ ನಾಸೀರ್ ಅಝ್ ಅರಿ ಸಯ್ಯಿದ್ ಬಾತಿಷ್ ತಂಙಳ್, ಸದ್ ರ್ ಫಾರೂಕ್ ದಾರಿಮಿ, ಜಮಾಅತ್ ಅಧ್ಯಕ್ಷ ಇಸ್ಮಾಯಿಲ್ ಹಾಜಿ ,ಕಾರ್ಯದರ್ಶಿ ಅಬ್ದುಲ್ ಖಾದರ್ ಹಾಜಿ, ಕೋಶಾಧಿಕಾರಿ ಸಾಧುಕುಂಞು ಸಾಗ್ ಬಾಗ್, ಉಪಾಧ್ಯಕ್ಷ ಇಬ್ರಾಹಿಂ ಕೂಡಾರ, ಕುಂಞಿ ಹಾಜಿ, ಅಶ್ರಫ್ ಮಾರಾಠಿ ಮೂಲೆ, ಜೊತೆ ಕಾರ್ಯದರ್ಶಿ ಇಸ್ಮಾಯಿಲ್ ಸಾಗ್, ಹಮೀದ್ ಕಿನ್ಯ, ಮಾಜಿ ಅಧ್ಯಕ್ಷ ರಾದ ಹುಸೈನ್ ಕುಂಞಿ ಹಾಜಿ, ಸಾಧುಕುಂಞಿ ಮಾಸ್ಟರ್, ಮಾಜಿ ಪ್ರಧಾನ ಕಾರ್ಯದರ್ಶಿ ಅಬೂಸಾಲಿ ಹಾಜಿ, ಮಾಜಿ ಉಪಾಧ್ಯಕ್ಷ ಇಸ್ಮಾಯಿಲ್, ತಬೂಕು ದಾರಿಮಿ,ವಕ್ಫ್ ಅಧಿಕಾರಿ ಅಬೂಬಕ್ಕರ್ ಮೋಂಟುಗೋಳಿ  ಮೊದಲಾದವರು ಉಪಸ್ಥಿತರಿದ್ದರು. ಇಸ್ಮಾಯಿಲ್ ಹಾಜಿ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News