ಸೈಯ್ಯದ್ ಮೌಲಾನ ಸೆಂಟ್ರಲ್ ಸಮಿತಿ ಸೌದಿ ಅರೇಬಿಯಾ ಕಾರ್ಯಕಾರಿಣಿ ಸಭೆ

Update: 2021-03-20 13:28 GMT

ಹಳೆಯಂಗಡಿ, ಮಾ. 20: ಹಳೆಯಂಗಡಿ ಕದಿಕೆ ಸೈಯ್ಯದ್ ಮೌಲಾನ ಸಮಿತಿಯ ಸೌದಿ ಅರೆಬಿಯಾ ಕೇಂದ್ರೀಕೃತ ಸೆಂಟ್ರಲ್ ಸಮಿತಿಯ ಕಾರ್ಯಕಾರಿಣಿ ಸಭೆಯು ಇತ್ತೀಚೆಗೆ ದಮಾಮ್‌ನಲ್ಲಿ ಜರುಗಿತು.

ಗೌರವಾಧ್ಯಕ್ಷ ಅಬ್ದುಲ್ ಅಝೀಝ್ ಮೂಡುತೋಟ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ 2021-22ನೇ ಸಾಲಿನ ನೂತನ ಸಮಿತಿಯ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ ಅಬ್ದುಲ್ ಖಾದರ್ ಕದಿಕೆ, ಉಪಾಧ್ಯಕ್ಷರಾಗಿ ಅಬ್ದುಲ್ ಸಲಾಂ ಮೂಡುತೋಟ, ಗೌರವಾಧ್ಯಕ್ಷರಾಗಿ ಅಬ್ದುಲ್ ಅಝೀಝ್ ಮೂಡುತೋಟ, ಕಾರ್ಯದರ್ಶಿಯಾಗಿ ಅಬ್ದುಲ್ ರಹೀಂ ಹಳೆಯಂಗಡಿ, ಸಹ ಕಾರ್ಯದರ್ಶಿಯಾಗಿ ಅಬ್ದುಲ್ ಸಲಾಂ ಹಳೆಯಂಗಡಿ, ಜೊತೆ ಕಾರ್ಯದರ್ಶಿಯಾಗಿ ಮನ್ಸೂರ್ ಸಾಗ್, ಕೋಶಾಧಿಕಾರಿಯಾಗಿ ಆಸಿಫ್ ಕಲ್ಲಾಪು ಹಾಗೂ ಸಮಿತಿ ಆಡಳಿತ ಮೇಲ್ವಿಚಾರಕರಾಗಿ ಮುಹಮ್ಮದ್ ಹಸನ್ ಮೂಡುತೋಟ, ಮುಹಮ್ಮದ್ ಇರ್ಷಾದ್ ಕದಿಕೆ, ಮುಹಮ್ಮದ್ ಶಿಹಾಬುದ್ದೀನ್ ಮೂಡುತೋಟ ಅವರು ಆಯ್ಕೆಯಾದರು.

ಸಭೆಯನ್ನು ಮುಹಮ್ಮದ್ ಹಸನ್ ಮೂಡುತೋಟ ಉದ್ಘಾಟಿಸಿದರು. ಇಸ್ಮಾಯಿಲ್ ಉಸ್ತಾದ್ ಕಾಟಿಪಳ್ಳ ದುಆ ಆಶೀರ್ವಚನೆಗೈದರು. ಮುಹಮ್ಮದ್ ಶಿಹಾಬುದ್ದೀನ್ ಮೂಡುತೋಟ ಕಿರಾಅತ್ ಪಠಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News