ಸೌದೆ ಹೊರೆಯೊಂದಿಗೆ ಬಿದ್ದು ಮಹಿಳೆ ಮೃತ್ಯು

Update: 2021-03-24 16:07 GMT

ಶಂಕರನಾರಾಯಣ, ಮಾ.24: ಸೌದೆ ಹೊರೆಯೊಂದಿಗೆ ಬಿದ್ದು ಮಹಿಳೆ ಯೊಬ್ಬರು ಮೃತಪಟ್ಟ ಘಟನೆ ಮಾ.22 ರಂದು ಸಂಜೆ ವೇಳೆ ನಡೆದಿದೆ.

ಮೃತರನ್ನು ಹಿಲಿಯಾಣ ಜೆಡ್ಡು ನಿವಾಸಿ ಸವಿತಾ(33) ಎಂದು ಗುರುತಿಸ ಲಾಗಿದೆ. ಇವರು ಮನೆಯ ಹತ್ತಿರದ ಹಾಡಿಯಿಂದ ಉರುವಲು ಸೌದೆ ಹೊರೆ ಯನ್ನು ಹೊತ್ತುಕೊಂಡು ಇಳಿಜಾರಿನಿಂದ ಕೂಡಿದ ಜಾಗದಲ್ಲಿ ಬರುವಾಗ ಸೌದೆ ಹೊರೆಯೊಂದಿಗೆ ಬಿದ್ದರೆನ್ನಲಾಗಿದೆ. ಗಂಭೀರವಾಗಿ ಗಾಯಗೊಂಡ ಇವರು, ಕೊಟೇಶ್ವರ ಆಸ್ಪತ್ರೆಗೆ ಕರೆದು ಕೊಂಡು ಹೋಗುವ ದಾರಿ ಮಧ್ಯೆ ಮೃತಪಟ್ಟರು.

ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News