​ಬಂಟ್ವಾಳ : ಜಮೀಯತುಲ್ ಫಲಾಹ್ ವತಿಯಿಂದ ಸಂತಾಪ ಸಭೆ

Update: 2021-03-30 06:45 GMT

ಬಿ.ಸಿ.ರೋಡ್ : ಜಮೀಯತುಲ್ ಫಲಾಹ್ ಬಂಟ್ವಾಳ  ತಾಲೂಕು ಘಟಕದ ವತಿಯಿಂದ ಇತ್ತೀಚಿಗೆ ಮೃತರಾದ ಸುಳ್ಯ ಜಾಮೀಯತುಲ್ ಫಲಾಹ್ ಅಧ್ಯಕ್ಷ  ಬೀರಾಮೋಯ್ದಿನ್ ಸುಳ್ಯ, ಮಕ್ಕಾದಲ್ಲಿ ವೈದ್ಯರಾಗಿದ್ದ ಉಪ್ಪಳದ ಡಾ. ಎ. ಕೆ. ಕಾಸಿಮ್, ದುಬೈ ರಾಸಲ್ ಕೈಮಾದ ಇಂಡಿಯನ್ ಹೈಸ್ಕೂಲ್ ನಲ್ಲಿ ಪ್ರಾಂಶುಪಾಲರಾಗಿದ್ದ ಪ್ರೊ. ಅಬೂಬಕರ್ ತುಂಬೆ, ಇಂಜಿನಿಯರ್ ವಾಝಿನ್ ಬಾಂಬಿಲ ಇವರ ಗುಣಗಾನ ಮಾಡಿ ಸಂತಾಪ ಸೂಚಿಸಲಾಯಿತು.

ಸಂಸ್ಥೆಯ ಅಧ್ಯಕ್ಷ ಹಾಜಿ ಎ.ಉಸ್ಮಾನ್ ಕರೋಪಾಡಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಎಂ.ಎಚ್. ಇಕ್ಬಾಲ್, ಕೋಶಾಧಿಕಾರಿ ಎಫ್.ಎಂ. ಬಶೀರ್ ಫರಂಗಿಪೇಟೆ, ನಿಕಟಪೂರ್ವ ಅಧ್ಯಕ್ಷರಾದ  ನೊಟರಿ ಕೆ. ಅಬೂಬಕರ್ ವಿಟ್ಲ, ಸುಲೈಮಾನ್ ಸೂರಿಕುಮೇರು, ಸದಸ್ಯರಾದ ಬಿ.ಮಹಮ್ಮದ್, ಸಯ್ಯದ್ ಇರಾ, ಅಬ್ದುಲ್ ರಝಾಕ್ ಅನಂತಾಡಿ, ಅಬ್ದುಲ್ ರಹಿಮಾನ್ ಹಾಜಿ ಕೇಪು, ಕೆ.ಎಸ್. ಮಹಮ್ಮದ್ ಕಡೇಶ್ವಾಲ್ಯ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News