ಅರ್ಕುಳ: ಮಾಹಿತಿ ಕೇಂದ್ರ ಆರಂಭ
Update: 2021-03-30 20:17 IST
ಮಂಗಳೂರು, ಮಾ.30: ಸಾರ್ವಜನಿಕರಿಗೆ ಸರಕಾರದ ವಿವಿಧ ಯೋಜನೆಗಳ ಮಾಹಿತಿ ನೀಡುವ ಸಲುವಾಗಿ ಅಡ್ಯಾರ್ ಗ್ರಾಪಂ ವ್ಯಾಪ್ತಿಯ ಅರ್ಕುಳದಲ್ಲಿ ಎಸ್ಡಿಪಿಐ ವತಿಯಿಂದ ತೆರೆಯಲಾದ ಮಾಹಿತಿ ಕೇಂದ್ರವನ್ನು ಅಬ್ದುಲ್ ಮಜೀದ್ ಬಾವ ಉದ್ಘಾಟಿಸಿದರು.
ಈ ಸಂದರ್ಭ ಜಿಲ್ಲಾ ಕಾರ್ಯದರ್ಶಿ ಅನ್ವರ್ ಸಾದತ್ ಬಜತ್ತೂರು, ಗ್ರಾಮ ಸಮಿತಿಯ ಅಧ್ಯಕ್ಷ ಯಾಸೀನ್ ಅರ್ಕುಳ, ಜಿಲ್ಲಾ ಸಮಿತಿ ಸದಸ್ಯರಾದ ಖಾದರ್ ಫರಂಗಿಪೇಟೆ, ಲ್ಯಾನ್ಸಿ ಥಾರಸ್, ರಶೀದ್ ಅರ್ಕುಳ ಮತ್ತಿತರರು ಉಪಸ್ಥಿತರಿದ್ದರು.