ಮೂಡಬಿದ್ರೆ : ಮಾ.31ರಂದು ಯುನಿವೆಫ್ ನಿಂದ "ಯುವಕರ ಸಮಾಗಮ"

Update: 2021-03-30 17:27 GMT

ಮೂಡಬಿದ್ರೆ : ಯುನಿವೆಫ್ ಕರ್ನಾಟಕ ದ.ಕ. ಜಿಲ್ಲಾ ಘಟಕದ ವತಿಯಿಂದ  ಮಾ.31ರ ಸಂಜೆ 4.45 ಗಂಟೆಗೆ ಮೂಡಬಿದ್ರೆ ಕೋಟೆಬಾಗಿಲಿನ ನೂರ್ ಮೊಹಲ್ಲಾದ ಶಮೀ ಕಾಟೇಜ್ ನಲ್ಲಿರುವ ನೂರುಲ್ ಹುದಾ ಮದ್ರಸದಲ್ಲಿ "ಯುವಕರ ಸಮಾಗಮ" ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಈ‌ ಕಾರ್ಯಕ್ರಮದಲ್ಲಿ "ಮುಸ್ಲಿಂ ಸಮುದಾಯ-ಭೂತ, ವರ್ತಮಾನ ಮತ್ತು ಭವಿಷ್ಯ" ಎಂಬ ವಿಷಯದಲ್ಲಿ ಯುನಿವೆಫ್ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿಯವರಿಂದ ಯುವ ಜಾಗೃತಿ ಕಾರ್ಯಕ್ರಮ ನಡೆಯಲಿದ್ದು, ಮೂಡಬಿದ್ರೆ ಪರಿಸರದ ಯುವಕರನ್ನು ಇದಕ್ಕೆ ವಿಶೇಷವಾಗಿ ಆಹ್ವಾನಿಸಲಾಗಿದೆ. ಹೆಚ್ಚಿನ ವಿವರಗಳಿಗೆ  ಮೊಬೈಲ್ ಸಂಖ್ಯೆ 8310598907 ನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News