ಉಡುಪಿ: ಪೊಲೀಸ್ ಸಿಬ್ಬಂದಿಗಳಿಂದ ವಿಶಿಷ್ಟ ರೀತಿಯ ಸಂಭ್ರಮಾಚರಣೆ
Update: 2021-04-01 12:54 GMT
ಉಡುಪಿ, ಎ.1: ಜಿಲ್ಲೆಯ 2005ನೆ ಬ್ಯಾಚಿನ 43 ಮಂದಿ ಮಹಿಳಾ ಹಾಗೂ ಪುರುಷ ಪೊಲೀಸ್ ಸಿಬ್ಬಂದಿಗಳು, ತಾವು ಇಲಾಖೆಗೆ ಸೇರಿ 16 ವರ್ಷಗಳು ಪೂರ್ಣಗೊಳಿಸಿದ ಸಂಭ್ರಮವನ್ನು ವಿಭಿನ್ನ ರೀತಿಯಲ್ಲಿ ಆಚರಿಸುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಸಂಭ್ರಮಾಚರಣೆಯ ಪ್ರಯುಕ್ತ ಇವರು, ಮಣಿಪಾಲದ ಸರಳೆಬೆಟ್ಟು ಬಳಿ ಇರುವ ಹೊಸಬೆಳಕು ಆಶ್ರಮಕ್ಕೆ 20000ರೂ. ಮೌಲ್ಯದ ದಿನಸಿ ಸಾಮಗ್ರಿಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ಮಣಿಪಾಲ ಠಾಣೆಯ ಪೊಲೀಸ್ ನಿರೀಕ್ಷಕ ಮಂಜುನಾಥ್, ಉಪ ನಿರೀಕ್ಷಕ ರಾಜಶೇಖರ ವಂದಲಿ, ಸಹಾಯಕ ಪೊಲೀಸ್ ಉಪ ನಿರೀಕ್ಷಕ ದಿವಾಕರ ಶರ್ಮ, 2005ನೇ ಬ್ಯಾಚಿನ ಪೊಲೀಸ್ ಸಿಬ್ಬಂದಿಗಳ ಪರವಾಗಿ ರಾಜಕುಮಾರ್, ದಯಾನಂದ ಪ್ರಭು, ಶಿವಾನಂದ, ಆಶಾಲತಾ ಹಾಗೂ ನೇತ್ರಾವತಿ, ಹೊಸಬೆಳಕು ಆಶ್ರಮದ ಸಂಚಾಲಕರಾದ ವಿನಯಚಂದ್ರ ಮೊದಲಾದವರು ಉಪಸ್ಥಿತರಿದ್ದರು.