ಕೆಎಂವೈಎ ದಮಾಮ್ : ನೂತನ ಪದಾಧಿಕಾರಿಗಳ ಆಯ್ಕೆ

Update: 2021-04-05 17:33 GMT

ಜುಬೈಲ್ : ಕಾಟಿಪಳ್ಳ ಮುಸ್ಲಿಂ ಯೂತ್ ಅಸೋಸಿಯೇಷನ್ ಈಸ್ಟರ್ನ್ ಪ್ರೋವಿನ್ಸ್ ಇದರ 32ನೇ ವಾರ್ಷಿಕ ಮಹಾಸಭೆಯು ಶುಕ್ರವಾರ ಜುಮಾ ನಮಾಝಿನ ಬಳಿಕ ಜುಬೈಲ್ ನಲ್ಲಿ ನಡೆಯಿತು.

ಕೆಎಂವೈಎ ಅಧ್ಯಕ್ಷ ಪಿ.ಎ. ಮುಹಮ್ಮದ್ ಬಶೀರ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಇಸ್ಮಾಯೀಲ್ ಕಾಟಿಪಳ್ಳ ದುಆ ಮಾಡಿದರು. ಈ ಸಂದರ್ಭ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ ನೌಶಾದ್ ರಶೀದ್, ಗೌರವಾಧ್ಯಕ್ಷರಾಗಿ ಪಿ.ಎ. ಮುಹಮ್ಮದ್ ಬಶೀರ್, ಕೋಶಾಧಿಕಾರಿಯಾಗಿ ಪಿ.ಎಂ. ತಾಜುದ್ದೀನ್, ಸಲಹೆಗಾರರಾಗಿ ನಝೀರ್, ಬಿ.ಎಂ.ರಫೀಖ್, ಪಿ.ಎಂ. ಅಬ್ದುಲ್ ಹಮೀದ್, ಮುಸ್ತಫ, ಪಿ. ಇ. ಮುಸ್ತಫ, ಶುಐಬ್ ಹಾಗೂ ಪ್ರಧಾನ ಕಾರ್ಯದರ್ಶಿ ಯಾಗಿ ಇಸ್ಮಾಯೀಲ್ ಕಾಟಿಪಳ್ಳ ಆಯ್ಕೆ ಗೊಂಡರು. ಉಪಾಧ್ಯಕ್ಷ ರಾಗಿ ಕಲಂದರ್, ಶಬೀರ್, ಕಾರ್ಯದರ್ಶಿಗಳಾಗಿ ರಫೀಖ್, ಆಸಿಫ್, ಸಂಘಟನಾ ಕಾರ್ಯದರ್ಶಿಯಾಗಿ ಶಕೀಲ್, ಜೊತೆ ಕೋಶಾಧಿಕಾರಿಯಾಗಿ ಶರ್ವಾನ್, ಮೀಡಿಯಾ ಕವರೇಜ್ ಗಾಗಿ ನೌಫಲ್ ಆಯ್ಕೆ ಗೊಂಡರು.

ಆಡಿಟರ್ ಅಬ್ದುಲ್ ಗಫ್ಫಾರ್ ಚುನಾವಣಾಧಿಕಾರಿಯಾಗಿ ಸದಸ್ಯರನ್ನು ನೇಮಕ ಮಾಡಿದರು. ದಮಾಮ್, ಕೋಬರ್, ಜುಬೈಲ್, ಅಲ್-ಹಸ್ಸಾ ಮತ್ತು ಜೀಝಾನ್ ನ ಸದಸ್ಯರು ಮಹಾಸಭೆಗೆ ಆಗಮಿಸಿದ್ದು ಝೂಂ ನಲ್ಲಿ ಜಿದ್ದಾ, ರಿಯಾದ್ ಮಾತ್ರವಲ್ಲದೆ ಊರಿನಲ್ಲಿರುವ ಸದಸ್ಯರು ಸಮಾರಂಭದಲ್ಲಿ ಭಾಗವಹಿಸಿದ್ದರು.

ಅಮಾನುದ್ದೀನ್  ಖಿರಾಅತ್ ಪಾರಾಯಣಗೈದರು. ಶರ್ ವಾನ್ ಇಬ್ನ್ ಮುಹ್ಯಿದ್ದೀನ್ ಸ್ವಾಗತಿಸಿದರು. ಇಸ್ಮಾಯಿಲ್ ಕಾಟಿಪಳ್ಳ ವಿರಚಿತ ಮರ್ ಹಬ ಯಾ ಶಹ್ ರ ರಮಳಾನ್ ಬುಲೆಟಿನ್ ಬಿಡುಗಡೆ ಗೊಳಿಸಲಾಯಿತು. ಇಸ್ಮಾಯೀಲ್ ಕಾಟಿಪಳ್ಳ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News