ಒಂಭತ್ತು ತಿಂಗಳ ಬಳಿಕ ಮೃತದೇಹ ಪತ್ತೆ

Update: 2021-04-06 15:57 GMT

ಕಾಪು, ಎ.6: ಕಳೆದ ವರ್ಷ ಮಣಿಪುರ ಗ್ರಾಮದ ಕೊಡಂಗಳ ವಿಷ್ಣುಮೂರ್ತಿ ದೇವಸ್ಥಾನದ ಸಮೀಪ ಅಕಸ್ಮಿಕವಾಗಿ ಹೊಳೆಗೆ ಬಿದ್ದು ನಾಪತ್ತೆಯಾಗಿದ್ದ ವ್ಯಕ್ತಿಯೊಬ್ಬರ ಮೃತದೇಹ ಇದೀಗ ಒಂಭತ್ತು ತಿಂಗಳ ಬಳಿಕ ಪತ್ತೆಯಾಗಿದೆ.

 ಮೃತರನ್ನು ಕೊಡಂಗಳ ಮುಕುಡೆ ನಿವಾಸಿ ಶ್ರೀನಿವಾಸ ನಾಯ್ಕ(72) ಎಂದು ಗುರುತಿಸಲಾಗಿದೆ. ಇವರು 2020ರ ಜು.3ರಂದು ವಿಪರೀತ ಮಳೆ ಬರು ವಾಗ ಚಪ್ಪಲಿ ಮತ್ತು ಚೀಲ ಬದಿಯಲ್ಲಿ ಇಟ್ಟು ಯಾವುದೋ ಕಾರಣಕ್ಕೆ ಹೊಳೆಯ ಬದಿಗೆ ಹೋದಾಗ ಆಕಸ್ಮಿಕವಾಗಿ ನೀರಿಗೆ ಬಿದ್ದು ನಾಪತ್ತೆಯಾಗಿದ್ದರು.

ಎ.6ರಂದು ಮಣಿಪುರದ ಮೂಡು ಕಲ್ಮಂಜೆ ಹೊಳೆಯ ಬದಿಯಲ್ಲಿ ಅಡ್ಡ ಬಿದ್ದ ಮರದ ಸಮೀಪ ಮೂಳೆಗಳು ಪತ್ತೆಯಾಗಿದ್ದು, ಪರಿಶೀಲಿಸಿದಾಗ ಇದು ಶ್ರೀನಿವಾಸ ನಾಯ್ಕ ಅವರ ಮೃತದೇಹ ಎಂಬುದು ದೃಢಪಟ್ಟಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News